ಶ್ರೀಲಂಕಾಗೆ ಚಾಹಲ್ ಕಡಿವಾಣ

ಮಂಗಳವಾರ, 20 ಜುಲೈ 2021 (16:59 IST)
ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗಳಿಗೆ ಕಡಿವಾಣ ಹಾಕಿದೆ.

Photo Courtesy: Google

ಇಂದೂ ಕೂಡಾ ಮತ್ತೆ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇತ್ತೀಚೆಗಿನ ವರದಿ ಬಂದಾಗ 26 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ.

ಭಾರತಕ್ಕೆ ಇಂದು ಸ್ಪಿನ್ನರ್ ಯಜುವೇಂದ್ರ ಚಾಹಲ್ ಆಪತ್ಬಾಂಧವರಾಗಿದ್ದಾರೆ. ಈಗಾಗಲೇ 2 ವಿಕೆಟ್ ಕಬಳಿಸಿರುವ ಅವರು ಲಂಕಾ ರನ್ ಗತಿಗೆ ಕಡಿವಾಣ ಹಾಕಿದ್ದಾರೆ. ಉಳಿದೊಂದು ವಿಕೆಟ್ ಭುವನೇಶ್ವರ್ ಕುಮಾರ್ ಗಳಿಸಿದ್ದಾರೆ. 28 ರನ್ ಗಳಿಸಿರುವ ಧನಂಜಯ ಡಿಸಿಲ್ವ ಮತ್ತು ಚರಿತ ಅಸಲಂಕ 2 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಆರಂಭಿಕರಾದ ಅವಿಶ್ಕಾ 50 ಮತ್ತು ಮಿನೋದ್ ಭಾನುಕಾ 36 ರನ್ ಗಳಿಸಿ ಔಟಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ