‘ಧೋನಿ ಬಗ್ಗೆ ಹೀಗೆಲ್ಲಾ ಹೇಳಕ್ಕೆ ನೀನ್ಯಾರಯ್ಯಾ?’!

ಶನಿವಾರ, 11 ನವೆಂಬರ್ 2017 (09:43 IST)
ಮುಂಬೈ: ಟಿ20 ಮಾದರಿ ಕ್ರಿಕೆಟ್ ನಿಂದ ಧೋನಿ ನಿವೃತ್ತಿಯಾಗಬೇಕು ಎಂದು ಆಗ್ರಹಿಸಿದ್ದ ಮಾಜಿ ವೇಗಿ ಅಜಿತ್ ಅಗರ್ಕರ್ ರನ್ನು ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ತರಾಟೆಗೆ ತೆಗೆದುಕೊಂಡಿದ್ದಾರೆ.

 
ಇದಕ್ಕೂ ಮೊದಲು ಅಭಿಮಾನಿಗಳೂ ಸಾಮಾಜಿಕ ಜಾಲತಾಣದಲ್ಲಿ ಅಗರ್ಕರ್ ಮಾತನಾಡುವುದು ನೋಡಿದರೆ ಪ್ರಧಾನಿ ಕಾರ್ಯನಿರ್ವಹಣೆ ಬಗ್ಗೆ ಮಾತನಾಡುವ ಶಾಸಕನ ಹಾಗಿದೆ ಎಂದು ಲೇವಡಿ ಮಾಡಿದ್ದರು.

‘ಧೋನಿ ಬಗ್ಗೆ ಹೀಗೆಲ್ಲಾ ಕಾಮೆಂಟ್ ಮಾಡಲು ಈ ಅಗರ್ಕರ್ ಯಾರು?’ ಎಂದು ಕಿರ್ಮಾನಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಧೋನಿಗೆ ಯಾವಾಗ ನಿವೃತ್ತಿಯಾಗಬೇಕೆಂದು ಗೊತ್ತಿದೆ. ಅದಕ್ಕೆ ಇವರಂತಹವರ ಅಪ್ಪಣೆ ಬೇಕಾಗಿಲ್ಲ ಎಂದಿದ್ದಾರೆ. ಇಂತಹವರೆಲ್ಲಾ ಧೋನಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮಾಧ್ಯಮಗಳ ಮುಂದೆ ಬಡ ಬಡಾಯಿಸುತ್ತಾರೆ ಎಂದು ಕಿರ್ಮಾನಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ