ಕ್ರಿಕೆಟಿಗ ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ!

ಶುಕ್ರವಾರ, 28 ಜುಲೈ 2017 (09:09 IST)
ಗಾಲೆ: ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಅಪೂರ್ವ  ಅವಕಾಶ ಸಿಕ್ಕರೂ ಬಳಸಿಕೊಳ್ಳದ ಟೀಂ ಇಂಡಿಯಾ ಆರಂಭಿಕ  ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೇ ಅಭಿಮಾನಿಗಳು ಶ್ರದ್ದಾಂಜಲಿ ಅರ್ಪಿಸಿದ್ದಾರೆ.


ನಿಮ್ಮ ಇಷ್ಟದೇವರು ಕೆಎಲ್ ರಾಹುಲ್ ಗೆ ಜ್ವರ ತರಿಸಿ ನಿಮಗೊಂದು ಅವಕಾಶ ಕೊಟ್ಟಿದ್ದರು. ಅದನ್ನು ನೀವು ಬಳಸಿಕೊಳ್ಳಲಿಲ್ಲ. ನಿಮ್ಮ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ ಎಂದು ಅಭಿಮಾನಿಯೊಬ್ಬರು ಕಾಲೆಳೆದಿದ್ದಾರೆ.

ಇನ್ನೊಬ್ಬರು, ಶ್ರೀಲಂಕಾದ ರಾಷ್ಟ್ರಗೀತೆಯಷ್ಟೂ ಉದ್ದವಾಗಿಲ್ಲ ಮುಕುಂದ್ ಇನಿಂಗ್ಸ್ ಎಂದು ಮೂದಲಿಸಿದ್ದಾರೆ. ಇನ್ನೊಬ್ಬರು ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಮುಕುಂದ್ ಮಾಡಿರುವ ಟ್ವೀಟ್ ಕೆಳಗೆ ‘ಹೋಗಪ್ಪಾ ದೇಶೀಯ ಕ್ರಿಕೆಟ್ ಆಡುತ್ತಿರು. ಅದಕ್ಕೇ ಲಾಯಕ್ಕು ನೀನು’ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ..  ಬಿಗ್ ಶಾಕ್! ವಿರಾಟ್ ಕೊಹ್ಲಿ ಮತ್ತು ಉದ್ಯೋಗ ಬಿಡಲು ಆದೇಶಿಸಿದ ಬಿಸಿಸಿಐ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ