ಪುಣೆ ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ಧೋನಿಗೆ ಮತ್ತೊಮ್ಮೆ ನಾಯಕನಾಗುವ ಅವಕಾಶ!

ಬುಧವಾರ, 22 ಫೆಬ್ರವರಿ 2017 (10:02 IST)
ರಾಂಚಿ: ಧೋನಿಗೆ ಯಾಕೋ ನಾಯಕನ ಪಟ್ಟ ಕೊನೆಯವರೆಗೂ ಬೆನ್ನು ಬಿಡೋದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮೊನ್ನೆಯಷ್ಟೇ ಐಪಿಎಲ್ ನ ಪುಣೆ ರೈಸರ್ಸ್ ತಂಡದ ನಾಯಕತ್ವ ಕಳೆದುಕೊಂಡ ಧೋನಿಗೆ ತಮ್ಮ ತವರು ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದೆ.

 
ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ತವರು ಜಾರ್ಖಂಡ್ ತಂಡದ ನಾಯಕನಾಗಿ ಧೋನಿ ಆಯ್ಕೆಯಾಗಿದ್ದಾರೆ. ಇದು ಫೆಬ್ರವರಿ 25 ರಿಂದ ಆರಂಭವಾಗಲಿದೆ. ವಿಶೇಷವೆಂದರೆ ಧೋನಿ ಟೀಂ ಇಂಡಿಯಾ, ಐಪಿಎಲ್ ನಲ್ಲಿ ತಮ್ಮ ತಂಡದ ನಾಯಕನಾಗಿ ಮೆರೆದಿದ್ದರೂ, ಇದುವರೆಗೆ ತವರು ರಾಜ್ಯದ ನಾಯಕನಾಗಿರಲಿಲ್ಲ.

ಇದೇ ಮೊದಲ ಬಾರಿಗೆ ಧೋನಿ ಜಾರ್ಖಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಧೋನಿಯ ಜತೆಗೆ ಟೀಂ ಇಂಡಿಯಾದಲ್ಲಿ ಆಡಿದ್ದ ವರುಣ್ ಏರೋನ್, ಸೌರಬ್ ತಿವಾರಿ ಕೂಡಾ ತಂಡದಲ್ಲಿದ್ದಾರೆ. ಈ ಯುವ ತಂಡಕ್ಕೆ ಇದೀಗ ಧೋನಿಯ ಮಾರ್ಗದರ್ಶನ ಪಡೆಯುವ ಅವಕಾಶ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ