ಹರ್ಭಜನ್ ಗೆ ಆಗ ಅನ್ಯಾಯವಾಗಿತ್ತು: ಹಳೆಯ ಘಟನೆಯನ್ನು ನೆನೆಸಿಕೊಂಡ ಅನಿಲ್ ಕುಂಬ್ಳೆ
ರವಿಚಂದ್ರನ್ ಅಶ್ವಿನ್ ಜತೆಗಿನ ಚ್ಯಾಟ್ ಶೋ ಒಂದರಲ್ಲಿ ಕುಂಬ್ಳೆ 2008 ರ ಪ್ರಕರಣವನ್ನು ನೆನೆಸಿಕೊಂಡಿದ್ದಾರೆ. ಆವತ್ತು ನಮ್ಮ ಒಬ್ಬ ಆಟಗಾರನಿಗೆ ಮೂರು ಪಂದ್ಯಗಳ ನಿಷೇಧವಾಯಿತು. ಹರ್ಭಜನ್ ಗೆ ಆಗ ಅನ್ಯಾಯವಾಗಿತ್ತು. ಎಲ್ಲರೂ ನಾವು ಸರಣಿಯನ್ನು ಅರ್ಧದಲ್ಲೇ ನಿಲ್ಲಿಸಿ ಮರಳಬೇಕು ಎಂದಿದ್ದರು.
ಆದರೆ ಒಂದು ವೇಳೆ ನಾವು ಹಾಗೆ ಮಾಡಿದ್ದರೆ ನಾವು ತಪ್ಪು ಮಾಡಿದ್ದಕ್ಕೇ ಹಾಗೆ ಮಾಡಿದೆವು ಎಂದುಕೊಳ್ಳುತ್ತಿದ್ದರು. ಆಗ ನನ್ನ ಅದೃಷ್ಟಕ್ಕೆ ತಂಡದಲ್ಲಿ ಸಾಕಷ್ಟು ಅನುಭವಿ, ಹಿರಿಯ ಆಟಗಾರರಿದ್ದರು. ಎಲ್ಲರೂ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದೆವು’ ಎಂದು ಕುಂಬ್ಳೆ ಸ್ಮರಿಸಿಕೊಂಡಿದ್ದಾರೆ.