ಬಿಸಿಸಿಐಗೆ ಸಡ್ಡು ಹೊಡೆಯಲು ಕ್ರಿಕೆಟಿಗ ಶ್ರೀಶಾಂತ್ ರೆಡಿ

ಗುರುವಾರ, 16 ಫೆಬ್ರವರಿ 2017 (11:35 IST)
ಕೊಚ್ಚಿ: ನೀವು ಕೊಡದಿದ್ದರೆ ನಾನೇ ಪಡೆಯುತ್ತೇನೆ ಎಂದು ಮಾಡಿ ತೋರಿಸಲು ಹೊರಟಿದ್ದಾರೆ ಎಸ್. ಶ್ರೀಶಾಂತ್.  ಸ್ಕಾಟ್ ಲೆಂಡ್ ಲೀಗ್ ನಲ್ಲಿ ಆಡಲು ಒಪ್ಪಿಗೆ ನೀಡದ ಬಿಸಿಸಿಐಗೆ ಸಡ್ಡು ಹೊಡೆಯಲು ಶ್ರೀಶಾಂತ್ ತೀರ್ಮಾನಿಸಿದ್ದಾರೆ.

 
ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾದ ಮೇಲೆ ವಿದೇಶಿ ಲೀಗ್ ನಲ್ಲಿ ಆಡಲು ಅವಕಾಶ ನೀಡಿ ಎಂದು ಕೇರಳ ವೇಗಿ ಶ್ರೀಶಾಂತ್ ಬಿಸಿಸಿಐ ಬಾಗಿಲು ತಟ್ಟಿದ್ದರು. ಆದರೆ ಬಿಸಿಸಿಐ ಶ್ರೀಶಾಂತ್ ಗೆ ನಿರಪೇಕ್ಷಣಾ ಪತ್ರ ನೀಡಲು ನಿರಾಕರಿಸಿದ್ದು ಶ್ರೀಶಾಂತ್ ರನ್ನು ಸಿಟ್ಟಿಗೆಬ್ಬಿಸಿದೆ.

ಬಿಸಿಸಿಐ ವಿರುದ್ಧ ಕಾನೂನು ಸಮರಕ್ಕೂ ಚಿಂತನೆ ನಡೆಸಿದ್ದರು. ಆದರೆ ಇದೀಗ ಅದೆಲ್ಲಾ ಬಿಟ್ಟು ಎರ್ನಾಕುಳಂ ನಲ್ಲಿ ನಡೆಯಲಿರುವ ಪ್ರಥಮ ದರ್ಜೆ ಕ್ರಿಕೆಟ್ ಮೂಲಕ ಮತ್ತೆ ಕ್ರಿಕೆಟ್ ಮೈದಾನಕ್ಕೆ ಲಗ್ಗೆಯಿಡಲು ತಯಾರಿ ನಡೆಸಿದ್ದಾರೆ. ನನ್ನ ವಿರುದ್ಧ ಬಿಸಿಸಿಐನಿಂದ ಅಜೀವ ನಿಷೇಧ ದಾಖಲೆ ಪತ್ರಗಳಿಲ್ಲ. ಹೀಗಾಗಿ ನಾನು ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ