ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾಗೆ ಯಾರ್ಕರ್ ಬೌಲಿಂಗ್ ಮಾಡಬೇಡ ಎಂದು ಧೋನಿ ಹೇಳಿದ್ದರಂತೆ!

ಶುಕ್ರವಾರ, 11 ಸೆಪ್ಟಂಬರ್ 2020 (10:45 IST)
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಎಂದರೆ ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಅರ್ಥ. ಆದರೆ ಬುಮ್ರಾಗೆ ಯಾರ್ಕರ್ ಬಾಲ್ ಎಸೆಯಬೇಡ ಎಂದು ಧೋನಿ ಹಿಂದೊಮ್ಮೆ ತಾಕೀತು ಮಾಡಿದ್ದರಂತೆ! ಈ ಬಗ್ಗೆ ಸ್ವತಃ ಬುಮ್ರಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


2016 ರಲ್ಲಿ ಸಿಡ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ನಾನು ಮೊದಲ ಏಕದಿನ ಪಂದ್ಯವಾಡಿದ್ದೆ. ಅದುವರೆಗೆ ಧೋನಿ ನಾನು ಬೌಲಿಂಗ್ ಮಾಡುವುದನ್ನು ನೋಡಿರಲಿಲ್ಲ. ಡೆತ್ ಓವರ್ ನಲ್ಲಿ ನಾನು ಯಾರ್ಕರ್ ಎಸೆಯಬಹುದೇ ಎಂದು ಅವರನ್ನು ಕೇಳಿದೆ. ಅದಕ್ಕೆ ಅವರು ಬೇಡ ಎಂದಿದ್ದರು. ಯಾಕೆಂದರೆ ನಾನಾಗ ಹೊಸಬ. ನನಗೆ ಕಷ್ಟಕರ ಯಾರ್ಕರ್ ಬೌಲಿಂಗ್ ಎಸೆಯುವುದು ಸಾಧ್ಯವಾಗದು ಎಂದು ಅವರು ಅಂದುಕೊಂಡಿದ್ದರು. ಆದರೆ ನನಗೆ ಬೇರೆ ಆಯ್ಕೆಯಿರಲಿಲ್ಲ. ಯಾರ್ಕರ್ ಎಸೆದೆ. ಅದನ್ನು ನೋಡಿ ಅವರೇ ನನ್ನ ಬಳಿ ಬಂದು ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ಬುಮ್ರಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ