ವಿವಾದಕ್ಕೆ ಕಾರಣವಾಯ್ತು ಕ್ರಿಕೆಟಿಗ ಧೋನಿಯ ಫ್ಯಾಮಿಲಿ ಟೂರ್

ಶುಕ್ರವಾರ, 31 ಆಗಸ್ಟ್ 2018 (08:59 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಮ್ಮ ಪತ್ನಿ, ಪುತ್ರಿ ಸಮೇತ ಶಿಮ್ಲಾ ಪ್ರವಾಸ ಕೈಗೊಂಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಧೋನಿ ಶಿಮ್ಲಾ ಪ್ರವಾಸದ ಖರ್ಚು ವೆಚ್ಚವನ್ನು ಅಲ್ಲಿನ ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಅಷ್ಟೇ ಅಲ್ಲ, ಅಲ್ಲಿನ ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ್ದವು. ಇದೀಗ ಆ ವಿವಾದಗಳಿಗೆ ಸಿಎಂ ಜೈ ರಾಮ್ ಠಾಕೂರ್ ಸ್ಪಷ್ಟನೆ ನೀಡಿದ್ದು, ಧೋನಿಯನ್ನು ನಮ್ಮ ರಾಜ್ಯದ ಅತಿಥಿಯಾಗಿ ನೋಡಲಾಗುತ್ತಿದೆ. ಆದರೆ ಅವರ ವಾಸ್ತವ್ಯಕ್ಕಾಗಿ ಸರ್ಕಾರದಿಂದ ನಯಾಪೈಸೆ ಖರ್ಚು ಮಾಡುತ್ತಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲದೆ, ಧೋನಿಯ ಭದ್ರತೆಯನ್ನು ಮಾತ್ರ ಸರ್ಕಾರದ ವತಿಯಿಂದ ನೋಡಿಕೊಳ್ಳಲಾಗುತ್ತಿದೆ. ಅದರ ಹೊರತಾಗಿ ಅವರು ಜಾಹೀರಾತಿನ ಚಿತ್ರೀಕರಣವೊಂದಕ್ಕೆ ಬಂದಿದ್ದಾರೆ. ಅವರ ಖರ್ಚು ವೆಚ್ಚವನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ