ಧೋನಿ, ಯುವರಾಜ್ ವೃತ್ತಿ ಜೀವನ ಶೀಘ್ರದಲ್ಲೇ ಫಿನಿಶ್?!

ಮಂಗಳವಾರ, 1 ಆಗಸ್ಟ್ 2017 (06:17 IST)
ಮುಂಬೈ: ಟೀಂ ಇಂಡಿಯಾ ಭವಿಷ್ಯದ ಟೀಂ ಕಟ್ಟುವಾಗ ಹಿರಿಯರಾದ ಧೋನಿ ಮತ್ತು ಯುವರಾಜ್ ಸಿಂಗ್ ಭವಿಷ್ಯವೇನು ಎಂಬ ಪ್ರಶ್ನೆ ಎಲ್ಲರದ್ದು. ಈ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.


 
ಧೋನಿ ಮತ್ತು  ಯುವರಾಜ್ ರನ್ನು ಟೋಪಿ ಕಿತ್ತು ಕೆಳಗೆ ಇಟ್ಟಂತೆ ಕಿತ್ತು ಹಾಕಲು ಸಾಧ್ಯವಿಲ್ಲ. ‘ಈ ಬಗ್ಗೆಅವರ ಜತೆ ಮಾತನಾಡಬೇಕು. ಅವರ ಜಾಗಕ್ಕೆ ಯಾರನ್ನು ತರಬಹುದು ಎಂದು ಚಿಂತನೆ ನಡೆಸಬೇಕು. ಒಂದೊಂದಾಗಿ ಕೆಲಸ ಮಾಡಿದ ಮೇಲೆ ಅವರ ನಿವೃತ್ತಿ ಬಗ್ಗೆ ಚಿಂತಿಸಬಹುದು’ ಎಂದು ಪ್ರಸಾದ್ ಹೇಳಿದ್ದಾರೆ.

ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಧೋನಿ, ಯುವಿ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಇತ್ತೀಚೆಗೆ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡಾ ಆಗ್ರಹಿಸಿದ್ದರು. ಯುವರಾಜ್ ಮುಂದಿನ ವಿಶ್ವಕಪ್ ವರೆಗೆ ಆಡಲು ಬಯಸುವುದಾಗಿ ಹೇಳಿದ್ದರು. ಆದರೆ ಧೋನಿ ಏನನ್ನೂ ಸ್ಪಷ್ಟವಾಗಿ ಹೇಳಿಲ್ಲ.

ಇದನ್ನೂ ಓದಿ.. ಡೆಲಿವರಿ ನಂತರ ಸೆಕ್ಸ್: ಮಹಿಳೆಯರು ಏಕೆ ಒಲ್ಲೆನೆಂತಾರೆ ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ