‘ಐ ಆಮ್ ಸಾರಿ’ ಎಂದರು ಹಾರ್ದಿಕ್ ಪಾಂಡ್ಯ! ಯಾರಿಗೆ? ನೀವೇ ಓದಿ

ಬುಧವಾರ, 15 ನವೆಂಬರ್ 2017 (08:32 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸಾರಿ ಎಂದಿದ್ದಾರೆ. ಆದರೆ ಯಾಕೆ? ಯಾರಿಗೆ ಎಂದು ನೀವು ಕೇಳಬಹುದು. ಹಾಗಿದ್ದರೆ ಈ ಸುದ್ದಿ ಓದಿ.

 
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆಯಲೆಂದು ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದಾರೆ. ಇದಕ್ಕೆ ಹಲವು ಪ್ರಶ್ನೆಗಳು ಎದ್ದಿವೆ. ಹಾರ್ದಿಕ್ ಕಡಿಮೆ ಕ್ರಿಕೆಟ್ ಆಡಿದ್ದಾರೆ. ಹಾಗಿದ್ದರೂ ವಿಶ್ರಾಂತಿ ನೆಪ ಹೇಳಿದ್ದಾರೆ ಎಂದು ಕೆಲವರು ಆಕ್ಷೇಪಿಸಿದ್ದಾರಂತೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಾರ್ದಿಕ್ ‘ನಾನು ಕಳೆದ ಒಂದು ವರ್ಷದಲ್ಲಿ 30 ಏಕದಿನ, 25 ಟಿ20 ಮತ್ತು 3 ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಒಬ್ಬ ಆಲ್ ರೌಂಡರ್ ಗೆ ಇದು ಬಹಳ ಸವಾಲೇ ಸರಿ. ಹಾಗಿದ್ದರೂ ನಾನು ಕಡಿಮೆ ಕ್ರಿಕೆಟ್ ಆಡಿದ್ದೇನೆಂದು ಕಾಮೆಂಟ್ ಮಾಡುವವರಿದ್ದರೆ ಅವರಿಗೆ ನಾನು ಹೇಳುವುದೊಂದೇ ‘ಐ ಆಮ್ ಸಾರಿ’ ಎಂದು ಪಾಂಡ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ