ಮುಸ್ತಫಿಜುರ್ ಗೈರು ಸೂಕ್ತ ಪರಿಸ್ಥಿತಿ ಆಗಿರಲಿಲ್ಲ: ಭುವನೇಶ್ವರ್

ಶನಿವಾರ, 28 ಮೇ 2016 (16:01 IST)
ಕ್ವಾಲಿಫೈಯರ್ 2ರಲ್ಲಿ ಮುಸ್ತಫಿಜುರ್ ಅವರ ಅನುಪಸ್ಥಿತಿ ನಮಗೆ ಸೂಕ್ತ ಪರಿಸ್ಥಿತಿ ಆಗಿರಲಿಲ್ಲ. ಆದರೆ ಮುಸ್ತಿಫಿಜುರ್ ಅವರಿಗೆ ಬದಲಿಯಾಗಿ ಆಡಿದ ಕಿವಿ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಭುವನೇಶ್ವರ್ ಬೆಂಬಲಿಸಿದರು.
 
ನಿರ್ಣಾಯಕ ಪಂದ್ಯದಲ್ಲಿ ಮುಸ್ತಫಿಜುರ್ ಅವರನ್ನು ಕಳೆದುಕೊಂಡಿದ್ದು ನಮಗೆ ಒಳಿತಾಗಲಿಲ್ಲ. ಆದರೆ ಬೌಲ್ಟ್ ಚೆನ್ನಾಗಿ ಬೌಲ್ ಮಾಡಿದರು. ಬೌಲ್ಟ್ ನೆಟ್‌ನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಸೆಮಿಫೈನಲ್ ಅಥವಾ ಫೈನಲ್ ಆಡುವ ಅವಕಾಶ ಸಿಗಬಹುದೆಂದು ಅವರಿಗೆ ಗೊತ್ತಿತ್ತು. ಆದರೆ ಅವರು ಹೆಚ್ಚಿಗೆ ರನ್ ಕೊಟ್ಟಿದ್ದಾರೆಂದು ಹೇಳಲಾಗುವುದಿಲ್ಲ. ಇವೆಲ್ಲಾ ಆಟದ ಭಾಗ ಎಂದು ಭುವನೇಶ್ವರ್ ಹೇಳಿದ್ದಾರೆ. 
 
ಬೌಲರುಗಳಿಗೆ ಡಿಫೆಂಡ್ ಮಾಡಲು ನಮ್ಮ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತವನ್ನು ಕಲೆಹಾಕಬೇಕು ಎಂದು ವಾರ್ನರ್ ಮುಂಚೆ ಹೇಳಿದ್ದರು. ಆದರೆ ಹೈದರಾಬಾದ್ ನಿನ್ನೆ ರಾತ್ರಿ ಮೊದಲ ಬೌಲಿಂಗ್ ತೆಗೆದುಕೊಂಡಿತು.  ಈ ನಿರ್ಧಾರವನ್ನು ಕುರಿತು ಪ್ರಶ್ನಿಸಿದಾಗ, ಎದುರಾಳಿಗಳ ಬಲವನ್ನು ಮನಸ್ಸಿನಲ್ಲಿಟ್ಟುಕೊಂಡು ಉತ್ತಮ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪ್ರತಿಕ್ರಿಯಿಸಿದರು. 

ಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ
 

ವೆಬ್ದುನಿಯಾವನ್ನು ಓದಿ