ರಾಮಮಂದಿರಕ್ಕೆ ಜೈ ಎಂದ ಪಾಕ್ ಕ್ರಿಕೆಟಿಗ: ಕೊಹ್ಲಿ ಮೌನ ಪ್ರಶ್ನಿಸಿದ ಟ್ವಿಟರಿಗರು

ಗುರುವಾರ, 6 ಆಗಸ್ಟ್ 2020 (11:05 IST)
ಮುಂಬೈ: ಅಯೋಧ್ಯೆಯಲ್ಲಿ ನಿನ್ನೆ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಿದ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ದನೇಶ್ ಕನೇರಿಯಾ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.


ರಾಮಮಂದಿರ ನಿರ್ಮಾಣವಾಗುತ್ತಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಕನೇರಿಯಾ ಟ್ವೀಟ್ ಮಾಡಿದ್ದರು. ಇದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಪಾಕ್ ಕ್ರಿಕೆಟಗನೇ ಪ್ರತಿಕ್ರಿಯಿಸಿರುವಾಗ ಭಾರತೀಯನಾಗಿದ್ದುಕೊಂಡು ಈ ವಿಚಾರದ ಬಗ್ಗೆ ಒಂದೇ ಒಂದು ಮಾತೂ ಆಡದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋರಣೆಯನ್ನು ಟ್ವಿಟರಿಗರು ಪ್ರಶ್ನಿಸಿದ್ದಾರೆ.

ಪಾಕ್ ಕ್ರಿಕೆಟಿಗನೂ ಭಾರತದಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಬಗ್ಗೆ ಸಂತೋಷದಿಂದಲೇ ಪ್ರತಿಕ್ರಿಯಿಸಿದ್ದಾರೆ. ಆದರೆ ಇಲ್ಲಿಯೇ ನೆಲೆಸಿರುವ ಕೊಹ್ಲಿ ಮಾತ್ರ ಜಾಹೀರಾತುಗಳ ಮೂಲಕ ದುಡ್ಡು ಮಾಡುವುದರ ಬಗ್ಗೆ ಮಾತ್ರ  ಚಿಂತೆ ಮಾಡುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ