ಸೀನಿಯರ್ಸ್ ತಂಡಕ್ಕೆ ನೋ ಎಂದ ರಾಹುಲ್ ದ್ರಾವಿಡ್

ಭಾನುವಾರ, 23 ಜುಲೈ 2017 (12:25 IST)
ಮುಂಬೈ: ಟೀಂ ಇಂಡಿಯಾದ ವಿದೇಶಿ ಪ್ರವಾಸಗಳಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕೋಚ್ ಆಗಿರುತ್ತಾರೋ, ಇಲ್ಲವೋ ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ದ್ರಾವಿಡ್ ಹಿರಿಯರ ತಂಡದೊಂದಿಗೆ ವಿದೇಶಿ ಪ್ರವಾಸಗಳಿಗೆ ತೆರಳುವುದಿಲ್ಲ ಎಂದು ಬಿಸಿಸಿಐ ಆಡಳಿತ ಮಂಡಳಿ ಅಧ್ಯಕ್ಷ ವಿನೋದ್ ರೈ ಹೇಳಿದ್ದಾರೆ.

 
ರವಿ ಶಾಸ್ತ್ರಿ ಜತೆಗೆ ದ್ರಾವಿಡ್ ಬ್ಯಾಟಿಂಗ್ ಮತ್ತು ಜಹೀರ್ ಬೌಲಿಂಗ್ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ ಎಂದು ಸುದ್ದಿ ಬಂದಿತ್ತು. ಆದರೆ ದ್ರಾವಿಡ್ ಈ ಹುದ್ದೆ ಒಪ್ಪಿಕೊಳ್ಳಲು ತಯಾರಿರಲಿಲ್ಲ ಎಂಬ ವರದಿ ಬಂದಿದೆ. ಆದರೆ ಜಹೀರ್ ಸ್ಥಾನದ ಕುರಿತು ಇನ್ನೂ ಗೊಂದಲ ಮುಂದುವರಿದಿದೆ.

ಒಮ್ಮೆ ಆಯ್ಕೆ ಮಾಡಿ ನಂತರ ಕಡೆಗಣಿಸಿ ದ್ರಾವಿಡ್ ಮತ್ತು ಜಹೀರ್ ಗೆ ಅವಮಾನಿಸಲಾಗಿದೆ ಎಂಬ ವರದಿಗಳನ್ನು ವಿನೋದ್ ರೈ ತಳ್ಳಿ ಹಾಕಿದ್ದಾರೆ. ಸಲಹಾ ಸಮಿತಿ ಇವರ ಹೆಸರು ಶಿಫಾರಸ್ಸು ಮಾಡಿತ್ತಷ್ಟೇ. ನೇಮಕವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ..  ಸಂಧಾನಕ್ಕೆ ಬಂದ ರಾಹುಲ್ ಗಾಂಧಿಗೆ ಖಡಕ್ ಉತ್ತರ ಕೊಟ್ಟ ನಿತೀಶ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ