ಅನಿಲ್ ಕುಂಬ್ಳೆಗೆ ಬೆಣ್ಣೆ ಸವರಿ, ರವಿಶಾಸ್ತ್ರಿಗೆ ತುಪ್ಪ ಸವರಿದ ರವಿಚಂದ್ರನ್ ಅಶ್ವಿನ್!

ಸೋಮವಾರ, 24 ಜುಲೈ 2017 (14:17 IST)
ಕೊಲೊಂಬೋ: ರವಿಚಂದ್ರನ್ ಅಶ್ವಿನ್ ಎಂದರೆ ಹಾಗೆಯೇ. ತಂಡದಲ್ಲಿ ಜಂಟಲ್ ಮೆನ್ ಅನಿಸಿಕೊಂಡವರು. ಯಾರಿಗೂ ಬೇಸರವಾಗದಂತೆ ನೋಡಿಕೊಳ್ಳುವವರು. ಇದೀಗ ಕೋಚ್ ವಿಚಾರದಲ್ಲಿಯೂ ಹಾಗೆಯೇ ಮಾಡಿದ್ದಾರೆ.


ಒಂದೆಡೆ ಮಾಜಿ ಕೋಚ್ ಅನಿಲ್ ಕುಂಬ್ಳೆಯನ್ನು ಹೊಗಳಿ ಇನ್ನೊಂದೆಡೆ ಹಾಲಿ ಕೋಚ್ ರವಿಶಾಸ್ತ್ರಿಗೂ ಬೇಸರವಾಗದಂತೆ ಹೇಳಿಕೆ ನೀಡಿದ್ದಾರೆ. ಮಾಜಿ ಕೋಚ್ ಅನಿಲ್ ಕುಂಬ್ಳೆಯಿಂದ ತಾನು ಸಾಕಷ್ಟು ಕಲಿತೆ. ಅವರು ಒಂದು ಪಂದ್ಯ ನಡೆಯುವ ಪಿಚ್ ನ ಬಗ್ಗೆ ಹಲವು ಯೋಜನೆಗಳನ್ನು ಹಾಕಿಕೊಡುತ್ತಿದ್ದರು. ಅವರು ಹಾಕಿಕೊಡುತ್ತಿದ್ದ ಯೋಜನೆಗಳು ನಿಜಕ್ಕೂ ನಮಗೆ ಸಾಕಷ್ಟು ಸಹಕಾರಿಯಾಗಿರುತ್ತಿತ್ತು ಎಂದು ಹೊಗಳಿದ್ದಾರೆ.

ಇನ್ನೊಂದೆಡೆ ಹಾಲಿ ಕೋಚ್ ರವಿಶಾಸ್ತ್ರಿಗೂ ಪ್ರಶಂಸೆ ನೀಡಿದ್ದಾರೆ. ಕಳೆದ ಬಾರಿ ಗಾಲೆ ಮೈದಾನದಲ್ಲಿ ಸೋತಾಗ ರವಿಶಾಸ್ತ್ರಿ ನಮ್ಮ ಜತೆಗಿದ್ದರು. ಆಗ ನಮ್ಮ ಮೂಡ್ ಸರಿ ಮಾಡಿದವರೇ ರವಿ ಶಾಸ್ತ್ರಿ. ಅವರು ಡ್ರೆಸ್ಸಿಂಗ್ ರೂಂನಲ್ಲಿ ಧನಾತ್ಮಕ ವಾತಾವರಣ ಬೆಳೆಸುತ್ತಾರೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ..  ಹೃದಯ ಗೆದ್ದ ಮಹಿಳೆಯರ ಅದ್ಧೂರಿ ಸ್ವಾಗತಕ್ಕೆ ಬಿಸಿಸಿಐ ಪ್ಲ್ಯಾನ್ !

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ