ಟ್ರೋಲ್ ಆದ ವಿರಾಟ್ ಕೊಹ್ಲಿಯ ನೆರವಿಗೆ ಬಂದ ಆರ್ ಸಿಬಿ

ಮಂಗಳವಾರ, 17 ನವೆಂಬರ್ 2020 (11:30 IST)
ಬೆಂಗಳೂರು: ದೀಪಾವಳಿಗೆ ಪಟಾಕಿ ಹೊಡೆಯಬೇಡಿ ಎಂದ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಲು ಯಾರೋ ವಿರುಷ್ಕಾ ದಂಪತಿ ಪಟಾಕಿ ಸಿಡಿಸುವ ಹಿನ್ನಲೆಯಲ್ಲಿ ತೆಗೆದ ಫೋಟೋವನ್ನು ಹರಿಯಬಿಟ್ಟು ಕೊಹ್ಲಿ ಹೇಳುವುದೊಂದು ಮಾಡುವುದು ಇನ್ನೊಂದು ಎಂದು ಟಾಂಗ್ ಕೊಟ್ಟಿದ್ದರು.


ಈ ಫೋಟೋಗೆ ಆರ್ ಸಿಬಿ ಸ್ಪಷ್ಟನೆ ನೀಡಿದೆ. ಟ್ರೋಲ್ ಆದ ತನ್ನ ನಾಯಕನ ನೆರವಿಗೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಫೋಟೋ ದೀಪಾವಳಿಗೆ ಪಟಾಕಿ ಹೊಡೆದಾಗ ತೆಗೆದಿದ್ದಲ್ಲ. ಯುಎಇನಲ್ಲಿ ಯುಎಇ ಡೇ ಸೆಲೆಬ್ರೇಷನ್ ಸಂದರ್ಭದಲ್ಲಿ ಪಟಾಕಿ ಸಿಡಿಸಿದಾಗ ತೆಗೆದ ಫೋಟೋ. ಪರಿಸರ ಕಾಪಾಡುವ ನಮ್ಮ ಹೊಣೆ ಯಾವತ್ತೂ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ