ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ನಿಂದ ನಿವೃತ್ತಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸಚಿನ್ ರಾಜ್ಯಸಭೆ ಸದಸ್ಯರಾಗಿದ್ದು, ಹಳ್ಳಿಯ ಶಾಲೆಯೊಂದರ ಅಭಿವೃದ್ಧಿಗೆ ತಮ್ಮ ಸಂಸದರ ನಿಧಿಯಿಂದ ಧನಸಹಾಯ ಮಾಡುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದರು.
ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೇ ತೆಂಡೂಲ್ಕರ್ ವಿದೂಷಕ ಚಾರ್ಲಿ ಚಾಪ್ಲಿನ್ ಕುರಿತು ಮೆಚ್ಚುಗೆಯನ್ನು ಹರಿಸಿ, ನಮಗೆ ನಗು ಉಕ್ಕಿಸುವಲ್ಲಿ ಎಂದಿಗೂ ವಿಫಲರಾಗಿರದ ವ್ಯಕ್ತಿ, ಶ್ರೇಷ್ಟ ನಟ, ಹಾಸ್ಯಗಾರ ಮತ್ತು ನಿರ್ದೇಶಕ -ಚಾರ್ಲಿ ಚಾಪ್ಲಿನ್ ಎಂದು ಬರೆದಿದ್ದಾರೆ.