ಅಂಡರ್-16 ಪಶ್ಚಿಮ ವಲಯ ತಂಡಕ್ಕೆ ಸಚಿನ್ ಪುತ್ರ ಅರ್ಜುನ್ ಆಯ್ಕೆ

ಬುಧವಾರ, 25 ಮೇ 2016 (20:02 IST)
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಹುಬ್ಬಳ್ಳಿಯಲ್ಲಿ ಮೇ 24ರಿಂದ ಆಡಲಿರುವ ಅಂತರ ವಲಯ ಪಂದ್ಯಾವಳಿಯಲ್ಲಿ ಅಂಡರ್-16 ಪಶ್ಚಿಮ ವಲಯ ತಂಡಕ್ಕೆ ಆಯ್ಕೆಯಾಗಿದ್ದಾನೆ. ಓಂ ಬೋಸ್ಲೆ  ತಂಡವನ್ನು ಮುನ್ನಡೆಸಲಿದ್ದು, ಜೂನ್ 6ರಂದು ಮುಕ್ತಾಯವಾಗಲಿದೆ.

 ಬರೋಡಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸ್ನೇಹಲ್ ಪಾರಿಖ್ ಪ್ರಕಟಿಸಿದ ಈ ತಂಡವನ್ನು ಅಖಿಲ ಭಾರತ ಕಿರಿಯರ ಆಯ್ಕೆ ಸಮಿತಿ ಸೋಮವಾರ ಆಯ್ಕೆ ಮಾಡಿದೆ. ಸಭೆಯಲ್ಲಿ ರಾಕೇಶ್ ಪಾರಿಖ್ ಅಧ್ಯಕ್ಷತೆ ವಹಿಸಿದ್ದು, ಆಯ್ಕೆ ಸಮಿತಿಯಲ್ಲಿ  ತುಶಾರ್ ಅರೋಥೆ, ಶಂತನು ಸುಗ್ವೇಕರ್, ಸಮೀರ್ ದಿಘೆ ಮತ್ತು ಕೃಷ್ಣ ರಾವ್  ಕೋಚ್‌ಗಳಾಗಿದ್ದಾರೆ. 
 
ಅಂಡರ್ -16 ಪಶ್ಚಿಮ ವಲಯ ತಂಡ ಒಎಮ್ ಭೋಸ್ಲೆ (ನಾಯಕ), ವಾಸುದೇವ ಪಾಟೀಲ್, ಸುವೇದ್ ಪಾರ್ಕರ್, ಸ್ಮಿಟ್ ಪಟೇಲ್, ಸನ್ ಪ್ರೀತ್ ಬಗ್ಗಾ ಯಶಸ್ವಿ ಜೈಸ್ವಾಲ್ ದಿವ್ಯಾಂಶ್ ಸಕ್ಸೇನಾ ನೀಲ್ ಜಾಧವ್ (ವಾರ), ಅರ್ಜುನ್ ತೆಂಡೂಲ್ಕರ್, ಯೋಗೇಶ್ ದೋಂಗ್ರೆ, ಅಥರ್ವ ಅಂಕೋಲೆಕರ್, ಸೂರಜ್ ಸೂರ್ಯಾಲ್, ಸಿದ್ಧಾರ್ಥ್ ದೇಸಾಯಿ, ಆಕಾಶ್ ಪಾಂಡೆ ಮತ್ತು ಮುಕುಂದ್ ಸರ್ದಾರ್.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ