ಹಲವು ದಿನಗಳ ನಂತರ ತಂಡಕ್ಕೆ ಬಂದ ಸುರೇಶ್ ರೈನಾಗೆ ಸಿಕ್ಕ ಸಂದೇಶವೇನು?!

ಶನಿವಾರ, 24 ಫೆಬ್ರವರಿ 2018 (09:29 IST)
ಕೇಪ್ ಟೌನ್: ಎಷ್ಟೋ ದಿನದ ನಂತರ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿ ದ.ಆಫ್ರಿಕಾ ವಿರುದ್ಧ ಟಿ20 ಪಂದ್ಯವಾಡುತ್ತಿರುವ ಸುರೇಶ್ ರೈನಾ ಈ ಅನುಭವ ಹಂಚಿಕೊಂಡಿದ್ದಾರೆ.
 

ಹಲವು ದಿನಗಳ ನಂತರ ಭಾರತ ತಂಡಕ್ಕಾಗಿ ಪ್ಯಾಡ್ ಕಟ್ಟಿಕೊಂಡು ಮೈದಾನಕ್ಕಿಳಿಯುವ ಮೊದಲು ತನಗೆ ತಂಡದಿಂದ ಸಿಕ್ಕ ಸಂದೇಶವೇನೆಂದು ಹೇಳಿಕೊಂಡಿದ್ದಾರೆ.

‘ವಿರಾಟ್ ನನ್ನ ಮೇಲೆ ವಿಶ್ವಾಸವಿಟ್ಟಿದ್ದರು. ಡ್ರೆಸ್ಸಿಂಗ್ ರೂಂ ವಾತಾವರಣವೇ ಆಹ್ಲಾದಕರವಾಗಿದೆ. ಎಲ್ಲರೂ ಪ್ರತಿಯೊಬ್ಬರ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ನಾನು ಬ್ಯಾಟಿಂಗ್ ಗೆ ಇಳಿಯುವ ಮೊದಲು ನನಗೆ ನನ್ನ ನ್ಯಾಚುರಲ್ ಆಟ ಆಡು ಎಂದು ಸಂದೇಶ ನೀಡಿದ್ದರು’ ಎಂದು ರೈನಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ