ರಾಹುಲ್ ದ್ರಾವಿಡ್ ಎಂದರೆ ಈ ಕ್ರಿಕೆಟಿಗನಿಗೆ ಭಯವಂತೆ!

ಶುಕ್ರವಾರ, 23 ಫೆಬ್ರವರಿ 2018 (11:17 IST)
ಮುಂಬೈ: ಅಂಡರ್ 19 ಭಾರತ ತಂಡದ ಕೋಚ್ ಆಗಿ ಯಶಸ್ಸು ಸಾಧಿಸಿದ ರಾಹುಲ್ ದ್ರಾವಿಡ್ ಬಗ್ಗೆ ಯುವ ಕ್ರಿಕೆಟಿಗ ನಾಗರಕೋಟಿಗೆ ಭಯವಿತ್ತಂತೆ!
 

ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿ ಸಂದರ್ಭ ವಯೋ ಸಹಜವಾಗಿ ನಾಗರಕೋಟಿ ಮತ್ತು ಇತರ ತಂಡದ ಸದಸ್ಯರಿಗೆ ದ್ರಾವಿಡ್ ಕೆಲವು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದರು. ಹಾಗಿದ್ದರೂ ಕ್ರಿಕೆಟಿಗರಿಗೆ ನ್ಯೂಜಿಲೆಂಡ್ ನಲ್ಲಿ ಕೆಲವು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂಬ ಆಸೆ ಇತ್ತಂತೆ.

ಆದರೆ ದ್ರಾವಿಡ್ ಬಿಲುಕುಲ್ ಒಪ್ಪುತ್ತಿರಲಿಲ್ಲವಂತೆ. ಟೂರ್ನಮೆಂಟ್ ನಡೆಯುವಾಗ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಖಡಕ್ ಆಗಿ ಹೇಳಿದ್ದರಂತೆ. ಹಾಗಿದ್ದರೂ ದಿನದ ಕೆಲ ಹೊತ್ತು ಕೆಲವೊಮ್ಮೆ ಹೊರಗೆ ಸುತ್ತಾಡಲು ದ್ರಾವಿಡ್ ಸರ್ ಅವಕಾಶ ನೀಡುತ್ತಿದ್ದರು. ಹಾಗಿದ್ದರೂ ಅವರು ಹೇಳಿದ ಸಮಯದೊಳಗೆ ಹೋಟೆಲ್ ಗೆ ಬಂದು ಸೇರಬೇಕಿತ್ತು ಎಂದು ನಾಗರಕೋಟಿ ಹೇಳಿದ್ದಾರೆ.

ದ್ರಾವಿಡ್ ಸರ್ ಎಂದರೆ ನಮಗೆ ಭಯವಿತ್ತು. ಹಾಗಿದ್ದರೂ ಅವರ ಸೂಚನೆಯನ್ನು ಮೀರಿರುತ್ತಿರಲಿಲ್ಲ. ದ್ರಾವಿಡ್ ಸರ್ ಏನೇ ಹೇಳಿದರೂ ನಮ್ಮ ಒಳ್ಳೆಯದಕ್ಕೇ ಹೇಳ್ತಾರೆ ಎಂದು ಅವರು ಹೇಳಿದ್ದನ್ನು ಪಾಲಿಸುತ್ತಿದ್ದೆವು ಎಂದು ನಾಗರಕೋಟಿ ಹೇಳಿದ್ದಾರೆ. ನಾಗರಕೋಟಿ ಅಂಡರ್ 19 ವಿಶ್ವಕಪ್ ನಲ್ಲಿ ತಮ್ಮ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ