ಕೆಎಲ್ ರಾಹುಲ್ ಗೆ ಜೈ ಶಿಖರ್ ಧವನ್ ಗೆ ಬೆಂಡೆತ್ತಿದ ಟ್ವಿಟರಿಗರು

ಸೋಮವಾರ, 4 ಮಾರ್ಚ್ 2019 (10:42 IST)
ಮುಂಬೈ: ಒಂದೇ ಒಂದು ಸರಣಿಯಿಂದ ಟೀಂ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ನಸೀಬು ಬದಲಾಗಿದೆ.


ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಕೆಎಲ್ ರಾಹುಲ್ ಫಾರ್ಮ್ ಗೆ ಮರಳಿದ್ದು ನೋಡಿ, ಶಿಖರ್ ಧವನ್ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವುದು ನೋಡಿ ಇದೀಗ ಟ್ವಿಟರಿಗರು ಧವನ್ ಗೆ ಕೊಕ್ ಕೊಟ್ಟು ರಾಹುಲ್ ರನ್ನು ಏಕದಿನದಲ್ಲಿ ಆಡಿಸಲು ಒತ್ತಾಯಿಸುತ್ತಿದ್ದಾರೆ.

ಶಿಖರ್ ಧವನ್ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವುದಕ್ಕೆ ಟ್ರೋಲ್ ಗೊಳಗಾಗಿದ್ದಾರೆ. ಅವರ ಬದಲು ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ರನ್ನೇ ಏಕದಿನದಲ್ಲೂ ಆರಂಭಿಕರಾಗಿ ಆಡಿಸಬೇಕು ಎಂದು ಟ್ವಿಟರಿಗರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ನಾಯಕ ಕೊಹ್ಲಿ ಕೂಡಾ ರಾಹುಲ್ ಗೆ ವಿಶ್ವಕಪ್ ಗೆ ಮೊದಲು ಹೆಚ್ಚು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಪಂದ್ಯಕ್ಕೆ ಕನ್ನಡಿಗ ಬ್ಯಾಟ್ಸ್ ‍ಮನ್ ತಂಡಕ್ಕೆ ಮರಳಿದರೂ ಅಚ್ಚರಿಯೇನಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ