ವಿರಾಟ್ ಕೊಹ್ಲಿ ಬೌಲರ್ ಗಳಿಗೆ ಸ್ಪೂರ್ತಿಯಾದ ಕತೆ ಹೇಳಿದ ಉಮೇಶ್ ಯಾದವ್

ಶನಿವಾರ, 18 ಫೆಬ್ರವರಿ 2017 (07:27 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಬೌಲರ್ ಗಳಿಗೆ ಹೇಗೆ ಉತ್ಸಾಹ ತುಂಬುತ್ತಾರೆ ಎಂದು ವೇಗಿ ಉಮೇಶ್ ಯಾದವ್ ಬಿಚ್ಚಿಟ್ಟಿದ್ದಾರೆ.

 
“ವಿರಾಟ್ ನಮ್ಮ ಕಡೆಗೆ ಬಾಲ್ ಎಸೆದು ನಿನಗೆ ಬೇಕಾದ ಹಾಗೆ ಫೀಲ್ಡ್ ಸೆಟ್ ಮಾಡು ಎಂದು ಸ್ವಾತಂತ್ರ್ಯ ಕೊಡುತ್ತಾರೆ. ನಂತರ ನಮ್ಮ ಯೋಜನೆ ಏನು, ಯಾವುದಾದರೂ ವಿಶೇಷ ಸ್ಥಳದಲ್ಲಿ ಫೀಲ್ಡರ್ ಗಳನ್ನು ನಿಲ್ಲಿಸಬೇಕಾಗುತ್ತದೇ ಎಂದು ಕೇಳುತ್ತಾರೆ. ನಮ್ಮ ಯೋಜನೆ ವಿಫಲವಾದರೆ ಮಾತ್ರ ಇನ್ನೊಂದು ಯೋಜನೆ ಪ್ರಯತ್ನ ಮಾಡೋಣ ಎನ್ನುತ್ತಾರೆ” ಎಂದು ಕೊಹ್ಲಿಯ ಗುಣಗಾನ ಮಾಡಿದ್ದಾರೆ.

ಹೀಗಾಗಿ ಯಾವುದೇ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಲು ತನ್ನದೇ ಯೋಜನೆ ರೂಪಿಸುವುದಾಗಿ ಯಾದವ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ