ತಂಡದಿಂದ ಕೈಬಿಡುವ ಹಂತದಲ್ಲಿ ಮಯಾಂಕ್ ಅಗರ್ವಾಲ್ ಕಾಪಾಡಿದ್ದ ವಿನಯ್ ಕುಮಾರ್

ಶನಿವಾರ, 5 ಅಕ್ಟೋಬರ್ 2019 (09:18 IST)
ಬೆಂಗಳೂರು: ಟೀಂ ಇಂಡಿಯಾ ಆರಂಭಿಕರಾಗಿ ದ್ವಿಶತಕ ಬಾರಿಸಿ ಯಶಸ್ಸು ಗಳಿಸಿರುವ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಒಂದು ಹಂತದಲ್ಲಿ ಫಾರ್ಮ್ ಸಮಸ್ಯೆಯಿಂದ ಕರ್ನಾಟಕ ತಂಡದಿಂದಲೇ ಹೊರ ಬೀಳುವ ಪರಿಸ್ಥಿತಿಯಲ್ಲಿದ್ದರಂತೆ.


2017 ರಲ್ಲಿ ಮಯಾಂಕ್ ಫಾರ್ಮ್ ಕುಸಿದಿತ್ತು. ಆ ಸಂದರ್ಭದಲ್ಲಿ ಅವರು ತಂಡದಿಂದ ಹೊರನಡೆಯುವ ಭೀತಿಯಲ್ಲಿದ್ದರು. ಆದರೆ ಆಗ ಮಯಾಂಕ್ ಗೆ ಸ್ಪೂರ್ತಿ ತುಂಬಿ ಉತ್ತಮವಾಗಿ ಆಡುವಂತೆ ಮಾಡಿದ್ದು ಅಂದು ಕರ್ನಾಟಕ ತಂಡದ ನಾಯಕರಾಗಿದ್ದ ವಿನಯ್ ಕುಮಾರ್.

ವಿನಯ್ ಕುಮಾರ್ ನೀಡಿದ ಧೈರ್ಯದಿಂದಾಗಿ ಮಯಾಂಕ್ ಆ ಋತುವಿನಲ್ಲಿ ತ್ರಿಶತಕ ಬಾರಿಸಿದರು. ಅದಾದ ಮೇಲೆ ಅವರು ಎಂದೂ ಹಿಂತಿರುಗಿ ನೋಡಲಿಲ್ಲ ಎಂದು ಕರ್ನಾಟಕದ ಪರ ಆಡುತ್ತಿದ್ದ ರಾಬಿನ್ ಉತ್ತಮ ಬಹಿರಂಗಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ