ಧೋನಿ ವಿಚಾರದಲ್ಲಿ ಜನರಿಗೆ ತಾಳ್ಮೆಯೇ ಇಲ್ಲ ಎಂದ ವಿರಾಟ್ ಕೊಹ್ಲಿ

ಬುಧವಾರ, 15 ಮೇ 2019 (09:11 IST)
ಮುಂಬೈ: ಧೋನಿ ಒಂದೇ ಒಂದು ವೈಫಲ್ಯ ಕಂಡರೂ ಟೀಕಿಸುವ ಜನರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.


ಸಂದರ್ಶನವೊಂದರಲ್ಲಿ ಮಾತನಾಡಿರುವ ಕೊಹ್ಲಿ ಯಾವುದೇ ಬ್ಯಾಟ್ಸ್ ಮನ್ ಒಂದೇ ಸಲ ವಿಫಲರಾದದರೂ ಜನ ಅವರ ಬಗ್ಗೆ ಟೀಕೆ ಮಾಡಲು ಶುರು ಮಾಡುತ್ತಾರೆ. ಜನರಿಗೆ ತಾಳ್ಮೆಯೇ ಇಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ನಾನು ಮೊದಲೇ ಹೇಳಿದ ಹಾಗೆ ಧೋನಿ ಒಬ್ಬ ಅಮೂಲ್ಯ ಆಟಗಾರ. ವಿಕೆಟ್ ಹಿಂದುಗಡೆ, ಮೈದಾನದಲ್ಲಿ, ಬ್ಯಾಟಿಂಗ್ ನಲ್ಲಿ ಅವರ ತಿಳುವಳಿಕೆ ನನಗೆ ಸಾಕಷ್ಟು ಸಹಾಯ ಮಾಡುತ್ತದೆ. ಅವರಂತಹ ಆಟಗಾರರು ನಮ್ಮ ತಂಡಕ್ಕೆ ಆಸ್ತಿ ಇದ್ದಂತೆ ಎಂದು ಕೊಹ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ