ಧೋನಿ ಪುಣೆ ರೈಸರ್ಸ್ ನಾಯಕತ್ವ ಕಳೆದುಕೊಂಡಿದ್ದಕ್ಕೆ ವೀರೇಂದ್ರ ಸೆಹ್ವಾಗ್ ಗೆ ಸಂತಸವಾಗಿದೆಯಂತೆ!

ಗುರುವಾರ, 23 ಫೆಬ್ರವರಿ 2017 (11:03 IST)
ನವದೆಹಲಿ: ಎಲ್ಲರೂ ಅಯ್ಯೋ.. ಧೋನಿಗೆ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ನಾಯಕತ್ವ ಕಳೆದುಕೊಳ್ಳಬೇಕಾಗುತ್ತಿದೆಯಲ್ಲಾ ಎಂದು ಅಲವತ್ತುಕೊಳ್ಳುತ್ತಿದ್ದರೆ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾತ್ರ ತನಗೆ ಸಂತಸವಾಗಿದೆ ಎಂದಿದ್ದಾರೆ!

 
ಮೊನ್ನೆಯಷ್ಟೇ ಧೋನಿಯನ್ನು ಪುಣೆ ರೈಸರ್ಸ್ ತಂಡದ ನಾಯಕ ಸ್ಥಾನದಿಂದ ಕಿತ್ತು ಹಾಕಿ ಆ ಸ್ಥಾನಕ್ಕೆ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ರನ್ನು ನೇಮಕ ಮಾಡಲಾಗಿತ್ತು. ಎಲ್ಲರಿಗೂ ಈ ಬಗ್ಗೆ ಬೇಸರವಾದರೆ, ಸೆಹ್ವಾಗ್ ಗೆ ಮಾತ್ರ ಖುಷಿಯಾಗಿದೆಯಂತೆ.

“ಅವರು ನಾಯಕತ್ವ ಕಳೆದುಕೊಂಡಿದ್ದೇ ಒಳ್ಳೆಯದಾಯಿತು. ಇನ್ನಾದರೂ , ನನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಾಮವಾಗಿ ಪುಣೆಯನ್ನು ಸೋಲಿಸಬಹುದು” ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ. ಜತೆಗೆ ಧೋನಿ ಒಬ್ಬ ಉತ್ತಮ ನಾಯಕರಾಗಿದ್ದರು ಎಂದೂ ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ