ತಂದೆಯ ಅಂತ್ಯಸಂಸ್ಕಾರಕ್ಕೆ ಬಾರದಂತೆ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ರನ್ನು ತಡೆದಿದ್ದು ಯಾರು?

ಭಾನುವಾರ, 22 ನವೆಂಬರ್ 2020 (09:55 IST)
ಮುಂಬೈ: ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗ ತಂದೆಯ ನಿಧನದ ಆಘಾತಕಾರಿ ಸುದ್ದಿ ಬಂದಿದೆ. ಆದರೆ ತಂದೆಯ ಅಂತ್ಯಸಂಸ್ಕಾರಕ್ಕೆ ಬಾರದೇ ಇರಲು ಸಿರಾಜ್ ನಿರ್ಧರಿಸಿದ್ದರು.


ಅಷ್ಟಕ್ಕೂ ಸಿರಾಜ್ ರನ್ನು ತವರಿಗೆ ಮರಳದಂತೆ ತಡೆದಿದ್ದು ಯಾರು? ಈ ಬಗ್ಗೆ ಬಿಸಿಸಿಐ ಹೇಳಿಕೆ ನೀಡಿದ್ದು, ನಾವು ಸಿರಾಜ್ ಗೆ ತವರಿಗೆ ಮರಳಲು ಅವಕಾಶ ನೀಡಿದ್ದೆವು. ಆದರೆ ಅವರು ಅಂತ್ಯ ಸಂಸ್ಕಾರಕ್ಕೆ ಬಾರದೇ ತಂಡದ ಜತೆಗೇ ಇರಲು ನಿರ್ಧರಿಸಿದರು. ಇದು ಅವರ ವೈಯಕ್ತಿಕ ನಿರ್ಧಾರವಾಗಿತ್ತು. ಯಾರೂ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ