ಮೋದಿ ಪ್ರಧಾನ ಅಲ್ಲ, ಪ್ರಚಾರದ ಮಂತ್ರಿಯಂತೆ!

ಶುಕ್ರವಾರ, 12 ಏಪ್ರಿಲ್ 2019 (20:07 IST)
ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ, ಅವರೊಬ್ಬ ಪ್ರಚಾರದ ಮಂತ್ರಿಯಾಗಿದ್ದಾರೆ. ಹೀಗಂತ ಸಚಿವರೊಬ್ಬರು ವ್ಯಂಗ್ಯವಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭೆ ಕ್ಷೇತ್ರದ ಅಲ್ಲಿಪೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಪ್ರಚಾರ ನಡೆಸಿದ್ರು.  

ಬಾಬುರಾವ ಚಿಂಚನಸೂರ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿದ್ದಾರೆ. ಚಿಂಚನಸೂರ ಪಕ್ಷ ತೊರೆದರೂ ಸಹ ಗುರುಮಠಕಲ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ ಎಂದರು.

ಸ್ವತಂತ್ರ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅವರಿಂದ ಏನು ಸಾಧ್ಯವಿಲ್ಲ. ಕಾಂಗ್ರೆಸ್ ದೇಶಕ್ಕೆ ರಕ್ತಕೊಟ್ಟಿದೆ ಎಂದರು.

ಪುಲ್ವಾಮ ದಾಳಿಯು ಇತಿಹಾಸದಲ್ಲಿ ಆಗದ ಘಟನೆಯಾಗಿದೆ. ಇಂತಹ ಘಟನೆ ನಡೆದಾಗ ಮೋದಿ ಪೊಟೋ ತೆಗೆದುಕೊಳ್ಳುತ್ತಿದ್ದರು. ಅವರು ಪ್ರಚಾರದ ಮಂತ್ರಿ ಎಂದು ಟೀಕೆ ಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ