ಬೆಂಗಳೂರಿಗೆ ಬಿಜೆಪಿಯವ್ರು ಮಸಿ ಬಳಿದ್ರು ಎಂದ ಕೈ ಅಭ್ಯರ್ಥಿ

ಭಾನುವಾರ, 14 ಏಪ್ರಿಲ್ 2019 (18:53 IST)
ರಾಜಕೀಯ ಕದನ ಕುತೂಹಲದಲ್ಲಿ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ. ಬಿಜೆಪಿಯವರು ಬೆಂಗಳೂರಿಗೆ ಮಸಿ ಬಳಿದಿದ್ದಾರೆ ಅಂತ ಕೈ ಅಭ್ಯರ್ಥಿ ದೂರಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ‌.ಕೆ.ಹರಿಪ್ರಸಾದ್ ಸಂವಾದದಲ್ಲಿ ಪಾಲ್ಗೊಂಡಿದ್ರು.

ಸ್ಮಾರ್ಟ್ ಟ್ ಸಿಟಿಯಾದ ಬೆಂಗಳೂರಿಗೆ ಬಿಜೆಪಿ ಕೂಡುಗೆ ಶೂನ್ಯ. ಮೋದಿಯವರ ಗುಜರಾತ್ ಮಾದರಿಗೆ ಇದುವರೆಗೂ ಸರಿಯಾದ ಉತ್ತರವಿಲ್ಲ. ಬಿಜೆಪಿಯವರು ಬೆಂಗಳೂರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ರು.
ಜಾಫರ್ ಷರೀಫ್, ಕೃಷ್ಣಪ್ಪ ನವರಂತಹ ನಾಯಕರು ಉತ್ತಮ ಕೊಡುಗೆ ನೀಡಿದ್ದಾರೆ. ಬಿಜೆಪಿಯಿಂದ ಆಯ್ಕೆಯಾದ ಸಂಸದರು ಬೆಂಗಳೂರಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದರು.

ದೇವೇಗೌಡರು, ನನ್ನ ನಡುವೆ ಉತ್ತಮ ಸಂಬಂಧವಿದೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ. ದಕ್ಷಿಣದಲ್ಲಿ ಜೆಡಿ ಎಸ್ ಕಾರ್ಯಕರ್ತರು ನಮ್ಮ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ