ನೈಸ್ ಮುಖ್ಯಸ್ಥ ಅಶೋಕ ಖೇಣಿ ಗೊತ್ತಿದ್ರೂ ಇಂಥ ಕೆಲಸ ಮಾಡಿದ್ರಾ?

ಭಾನುವಾರ, 14 ಏಪ್ರಿಲ್ 2019 (16:36 IST)
ಬೀದರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಪರ ಪ್ರಚಾರ ವೇಳೆ ನೈಸ್ ಸಂಸ್ಥೆ ಮುಖ್ಯಸ್ಥ ಹಾಗೂ ಮಾಜಿ ಶಾಸಕ ಎಡವಟ್ಟು ಮಾಡಿಕೊಂಡಿದ್ದಾರೆ.

ನೈಸ್ ಮುಖ್ಯಸ್ಥ ಪ್ರಚಾರಕ್ಕಾಗಿ ಮಕ್ಕಳನ್ನ ಬಳಿಸಿಕೊಂಡ ಘಟನೆ ಬೀದರ್ ನ ನಿರ್ಣಾ ಗ್ರಾಮದಲ್ಲಿ ನಡೆದಿದೆ. ಅನೇಕ ಕಡೆ ಪ್ರಚಾರ ಮಾಡುವ ವೇಳೆ ಮಕ್ಕಳ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನರೇಂದ್ರ ಮೋದಿ ಚೌಕಿದಾರ ಚೋರ್ ಹೈ ಎಂದು ಅಶೋಕ ಖೇಣಿ ಮಕ್ಕಳಿಂದ ಘೋಷಣೆ ಕೂಗಿಸಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ ಮಾಡುವುದು ಅಪರಾಧ ಅಂತ ಗೊತ್ತಿದ್ರು ಮಕ್ಕಳ ಬಳಕೆಯನ್ನು ಖೇಣಿ ಮಾಡಿಕೊಂಡಿದ್ದಾರೆ.

ಮಕ್ಕಳು ಪ್ರಚಾರಕ್ಕೆ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ