ಪಕ್ಷಬೇಧ ಮರೆತು ಬಿಂದಾಸ್ ಸ್ಟೆಪ್ ಹಾಕಿದ ನಾಯಕರು

ಭಾನುವಾರ, 14 ಏಪ್ರಿಲ್ 2019 (17:33 IST)
ಲೋಕಸಭಾ ಚುನಾವಣಾ ಗುಂಗು ಮರೆತು ಹಾಗೂ ಪಕ್ಷಬೇಧ ಮರೆತು ಅಭ್ಯರ್ಥಿಗಳು ಬಿಂದಾಸ್ ಸ್ಟೇಪ್ಸ್ ಹಾಕಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಾಬಾ ಅಂಬೇಡ್ಕರ್ 128 ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಬೀದರ್ ನಲ್ಲಿ ರಾಜಕೀಯ ನಾಯಕರಿಂದ ಸಖತ್ ಸ್ಟೇಪ್ ಹಾಕಲಾಗಿದೆ.  

ಪಕ್ಷಬೇಧ ಮರೆತು ಸಖತ್ ಸ್ಟೇಪ್ ಹಾಕಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಗಮನ ಸೆಳೆದರು.
ಚುನಾವಣೆ ಕಣದಲ್ಲಿ ಪರಸ್ಪರ ಎದುರಾಳಿಯಾದ್ರೂ ಈಶ್ವರ ಖಂಡ್ರೆ, ಭಗವಂತ ಖೂಬಾ ಸಖತ್ ಸ್ಟೇಪ್ ಹಾಕಿದ್ರು. ಅಭ್ಯರ್ಥಿಗಳಿಗೆ ಸಚಿವ ಬಂಡೆಪ್ಪ ಖಾಶೆಂಪೂರ್, ಎಮ್ ಎಲ್ ಸಿ ವಿಜಯ ಸಿಂಗ್, ಸೇರಿದಂತೆ ಅನೇಕ ರಾಜಕೀಯ ಮುಖಂಡರಿಂದ ಸಾಥ್ ದೊರೆಯಿತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ