ಅಳುಮುಂಜಿಗಳೇ? ಪರವಾಗಿಲ್ಲ.. ಸ್ವಲ್ಪ ಕಣ್ಣೀರು ಹಾಕಿ!

ಸೋಮವಾರ, 13 ಫೆಬ್ರವರಿ 2017 (11:24 IST)
ಬೆಂಗಳೂರು:  ಯಾರಾದರೂ ಅಳುತ್ತಿರುವವರನ್ನು ನೋಡಿದರೆ ಸಂಕಟವಾಗುತ್ತದೆ. ಕಣ್ಣೀರು ಕೆಳಗೆ ಬೀಳದಂತೆ ಕಾಪಾಡುತ್ತೇನೆ ಎಂದು ನಮ್ಮ ಹೃದಯಕ್ಕೆ ಹತ್ತಿರವಾದವರ ಬಳಿ ಡೈಲಾಗ್ ಹೊಡೆಯುತ್ತೇವೆ. ಪರವಾಗಿಲ್ಲ. ಕಣ್ಣೀರು ಹಾಕಲು ಬಿಡಿ. ಇದು ಒಳ್ಳೆಯದೇ!

 
ಯಾಕೆ ಅಂತೀರಾ? ಕಣ್ಣೀರು ಹಾಕುವುದರಿಂದ ಮನಸ್ಸು ಹಗುರವಾಗುವುದಷ್ಟೇ ಅಲ್ಲ. ಕಣ್ಣಿನಲ್ಲಿರುವ ಕೊಳೆ ಕರಗಿ ಹೋಗುತ್ತದೆ.  ಉದ್ವೇಗಕ್ಕೊಳಗಾಗಿ ಅಳುವಾಗ ಕಣ್ಣೀರಿನ ಜತೆ ಹಲವು ವಿಷಕಾರಿ ರಾಸಾಯನಿಕಗಳು ಜಾರಿ ಹೋಗುತ್ತವೆ ಅಲ್ಲದೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ.

ಕಣ್ಣೀರು ಸುರಿಸುವುದರಿಂದ ಕಣ್ಣಿನ ದೃಷ್ಟಿ ತೀಕ್ಷ್ಣವಾಗುತ್ತದಂತೆ. ಇದಕ್ಕಿಂತ ಮುಖ್ಯವಾಗಿ ಕಣ್ಣೀರಿನ ಮೂಲಕ ನಮ್ಮ ದುಃಖ ದುಮ್ಮಾನಗಳನ್ನು ದೂರ ಮಾಡಬಹುದು. ನಮ್ಮ ಲಹರಿಯನ್ನು ಚೆನ್ನಾಡಿಗಡಬಹುದು.

ಎಲ್ಲಕ್ಕಿಂತ ಹೆಚ್ಚು ಕಣ್ಣೀರಿನ ಮೂಲಕ ನಮ್ಮ ಆಪ್ತರ ಜತೆ ಹೃದಯದ ಸಂಭಾಷಣೆ ನಡೆಸಬಹುದು! ಅಂದರೆ ಕಣ್ಣೀರು ನಮ್ಮ ಭಾವನೆಯನ್ನು ಹೇಳುತ್ತದೆ. ಹಾಗಾಗಿ ಕಣ್ಣೀರು ಎನ್ನುವುದು ದೌರ್ಬಲ್ಯವಲ್ಲ. ಅದು ಶಕ್ತಿ..! ಕಣ್ಣೀರಿಗೆ ಕರಗದವರು ಯಾರು ಹೇಳಿ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ