ಮಧುಮೇಹಿಗಳು ಕಿತ್ತಳೆ ಹಣ‍್ಣುಗಳನ್ನು ಸೇವಿಸಬಹುದೇ?

ಸೋಮವಾರ, 12 ಏಪ್ರಿಲ್ 2021 (07:09 IST)
ಬೆಂಗಳೂರು : ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಯಾವಾಗಲೂ ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಎಚ್ಚರವಾಗಿರಬೇಕು. ಯಾಕೆಂದರೆ ಕೆಲವೊಂದು ಆಹಾರಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಹಾಗಾದ್ರೆ ಮಧುಮೇಹಿಗಳು ಕಿತ್ತಳೆ ಹಣ‍್ಣುಗಳನ್ನು ಸೇವಿಸಬಹುದೇ?

ಮಧುಮೇಹಿಗಳಿಗೆ ಫೈಬರ್ ಅಧಿಕ ಮತ್ತು ಸಮತೋಲಿತ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಹಾಗಾಗಿ ಕಿತ್ತಳೆ ಹಣ‍್ಣುಗಳನ್ನು ಅವರು ಸೇವಿಸಬಹುದು.  

ಯಾಕೆಂದರೆ ಕಿತ್ತಳೆ ಹಣ್ಣಿನಲ್ಲಿ ಅಧಿಕ ಮತ್ತು 40ರಿಂದ 50ರನಡುವೆ  ಗ್ಲೈಸೆಮಿಕ್ ಸೂಚಿಯನ್ನು  ಹೊಂದಿರುತ್ತದೆ ಮತ್ತು ನೈಸರ್ಗಿಕ ಸಕ್ಕರೆಯೂ ಸಮೃದ್ಧವಾಗಿದೆ.  ಅಲ್ಲದೇ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ಮಧುಮೇಹಿಗಳು ಕಿತ್ತಳೆ ಹಣ‍್ಣುಗಳನ್ನು ಸೇವಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ