ಇದೆಂತಹಾ ಭಂಡ ಧೈರ್ಯ ಚೀನಾಕ್ಕೆ?!

ಬುಧವಾರ, 19 ಏಪ್ರಿಲ್ 2017 (13:48 IST)
ನವದೆಹಲಿ: ಸದಾ ಭಾರತದೊಂದಿಗೆ ಅರುಣಾಚಲ ಪ್ರದೇಶ ತನ್ನದು ಎಂದು ಗಡಿ ತಗಾದೆ ತೆಗೆಯುವ ಚೀನಾ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅದು ಮಾಡಿದ ಕೆಲಸ ನಿಜಕ್ಕೂ ಭಾರತವನ್ನು ಕೆರಳಿಸುವಂತಿದೆ.

 
ಭಾರತದ ಭೂಭಾಗದಲ್ಲಿರುವ ಅರುಣಾಚಲಪ್ರದೇಶದ ಆರು ಪ್ರದೇಶಗಳಿಗೆ ತನ್ನದೇ ಹೆಸರಿಟ್ಟದೆ. ಇತ್ತೀಚೆಗಷ್ಟೇ ಚೀನಾದ ಎಚ್ಚರಿಕೆಯ ಹೊರತಾಗಿಯೂ ಟಿಬೆಟಿಯನ್ ಧರ್ಮಗುರು ದಲೈಲಾಮಾಗೆ ಭಾರತ ಭೇಟಿಗೆ ಅವಕಾಶ ಕೊಟ್ಟಿದ್ದ ಭಾರತಕ್ಕೆ ಸಡ್ಡು ಹೊಡೆಯಲು ಚೀನಾ ಈ ರೀತಿ ಮಾಡಿದೆ ಎನ್ನಲಾಗಿದೆ.

ನಮ್ಮ ಹಳೇ ಕಾಲದಲ್ಲೇ ಈ ಪ್ರದೇಶಗಳಿಗೆ ಈ ಹೆಸರಿತ್ತು. ಅದನ್ನು ಮತ್ತೆ ಮರುನಾಮಕರಣ ಮಾಡಿದ್ದೇವಷ್ಟೇ ಎಂದು ಚೀನಾ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇದಕ್ಕೆ ಭಾರತದ ಪ್ರತಿಕ್ರಿಯೆ ಹೇಗಿರುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ