ಅಸಲಿಗೆ ಚೀನಾ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವುದು ಏಕೆ ಗೊತ್ತೇ?
ಇದುವೇ ಚೀನಾ ಸಂಕಟಕ್ಕೆ ಕಾರಣ. ಅದೇ ಕಾರಣಕ್ಕೆ ಭಾರತ ತನ್ನ ಗಡಿ ಮೀರಿ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಅಷ್ಟೇ ಅಲ್ಲದೆ, ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟುವ ಕುಟಿಲ ಬುದ್ಧಿ ತೋರುತ್ತಿದೆ. ಆದರೆ ಚೀನಾ ಬೆದರಿಕೆಗೆ ಬಗ್ಗದ ಭಾರತ ಗಡಿನಿಯಂತ್ರಣ ರೇಖೆಯೊಳಗೆ ತನ್ನ ಕೆಲಸ ಮುಂದುವರಿಸಿದೆ. ಇದನ್ನು ಅರಗಿಸಿಕೊಳ್ಳಲು ಚೀನಾಕ್ಕೆ ಸಾಧ್ಯವಾಗುತ್ತಿಲ್ಲ.