ಹಿಂದೂ ಸಂತರೆಲ್ಲಾ ಗೋಮಾಂಸ, ಮಟನ್ ಭಕ್ಷಕರು: ಝಾಕಿರ್ ನಾಯ್ಕ್

Krishnaveni K

ಶುಕ್ರವಾರ, 4 ಅಕ್ಟೋಬರ್ 2024 (10:41 IST)
ಇಸ್ಲಾಮಾಬಾದ್: ಹಿಂದೂ ಸಾಧು ಸಂತರೆಲ್ಲಾ ಗೋಮಾಂಸ, ಮಟನ ನಂತಹ ಮಾಂಸಾಹಾರ ಭಕ್ಷಕರೇ ಎಂದು ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ವಿವಾದಿತ ಹೇಳಿಕೆ ನೀಡಿದ್ದಾನೆ.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಝಾಕಿರ್ ನಾಯ್ಕ್ ಇಂತಹದ್ದೊಂದು ಹೇಳಿಕೆ ನೀಡಿದ್ದಾನೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆತ ಹಿಂದೂ ಧರ್ಮದ ಸಾಧು ಸಂತರೆಲ್ಲಾ ಗೋಮಾಂಸ ಭಕ್ಷಕರು. ಅವರು ಮಟನ್ ಕೂಡಾ ತಿನ್ನುತ್ತಾರೆ. ಗೋಮಾಂಸ ನಿಷೇಧ ಎನ್ನುವುದು ಕೇವಲ ರಾಜಕೀಯಕ್ಕಷ್ಟೇ ಎಂದಿದ್ದಾನೆ.

ಮಹಿಳೆಯರಿಗೆ ಕಿರುಕುಳ ನೀಡಿದರೆ ಕೇವಲ 3 ವರ್ಷ ಶಿಕ್ಷೆಯಷ್ಟೇ. ಆದರೆ ಗೋಮಾಂಸ ಸೇವಿಸಿದರೆ ಭಾರತದಲ್ಲಿ 5 ವರ್ಷ ಕಠಿಣ ಶಿಕ್ಷೆ ನೀಡಲಾಗುತ್ತದೆ. ಇದು ಯಾವ ಸೀಮೆ ನ್ಯಾಯ ಎಂದು ಝಾಕಿರ್ ನಾಯ್ಕ್ ನಾಲಿಗೆ ಹರಿಬಿಟ್ಟಿದ್ದಾನೆ. ಈತನ ಭಾಷಣ ಈಗ ವಿವಾದಕ್ಕೆ ಕಾರಣವಾಗಿದೆ.

ನಿನ್ನೆಯಷ್ಟೇ ಕರ್ನಾಟಕ ಸರ್ಕಾರದ ಸಚಿವ ದಿನೇಶ್ ಗುಂಡೂರಾವ್ ಹಿಂದೂ ಕ್ರಾಂತಿಕಾರಿ ನಾಯಕ ವೀರ ಸಾವರ್ಕರ್ ಗೋಮಾಂಸ ಸೇವಿಸುತ್ತಿದ್ದರು ಎಂದು ವಿವಾದ ಸೃಷ್ಟಿಸಿದ್ದರು. ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಝಾಕಿರ್ ನಾಯ್ಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಇಡೀ ಹಿಂದೂ ಸಂತರೆಲ್ಲರೂ ಗೋಮಾಂಸ ಭಕ್ಷಕರು ಎಂದಿದ್ದಾನೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ