ಕೂಡಲೇ ಆಯ್ಕೆ ಸಮಿತಿ ಸಭೆ ಕರೆದು ತಂಡ ಘೋಷಿಸಿ: ಬಿಸಿಸಿಐಗೆ ಆಡಳಿತ ಸಮಿತಿ ತಾಕೀತು

ಗುರುವಾರ, 4 ಮೇ 2017 (18:40 IST)
ಸುಪ್ರೀಂಕೋರ್ಟ್ ನೇಮಿಸಿರುವ ಬಿಸಿಸಿಐನ ಆಡಳಿತ ಸಮಿತಿ ಕೂಡಲೇ ಅಯ್ಕೆ ಸಮಿತಿ ಸಭೆ ಕರೆದು ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾವನ್ನ ಘೋಷಿಸುವಂತೆ ಕಟ್ಟಪ್ಪಣೆ ಮಾಡಿದೆ.  
 

ಚಾಂಪಿಯನ್ಸ್ ಟ್ರೋಫಿಗೆ ತಂಡ ಘೋಷಣೆಯ ಡೆಡ್ ಲೈನ್ ಏಪ್ರಿಲ್ 28ಕ್ಕೇ ಅಂತ್ಯವಾಗಿದ್ದರೂ ಇದುವರೆಗೆ ತಂಡ ಘೋಷಿಸಿಲ್ಲವೇಕೆ? ಆದಾಯ ಹಂಚಿಕೆ ಕುರಿತಂತೆ ಐಸಿಸಿ ಜೊತೆ ಬಿಸಿಸಿಐ ನಡೆದುಕೊಂಡ ರೀತಿ ಬಗ್ಗೆಯೂ ಸಮಿತಿ ಪ್ರಶ್ನೆ ಮಾಡಿದೆ.

ಆಡಳಿತ ಸಮಿತಿಯ ಈ ನಿರ್ದೇಶನದಿಂದ ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಸರಣಿಯಿಂದ ಭಾರತ ತಂಡ ಹೊರಗುಳಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಜೂನ್ 1ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ತಂಡ ಸಮರ್ಥ ಪ್ರದರ್ಶನ ನೀಡಲು ಬೇಕಾದ ಎಲ್ಲ ತಯಾರಿ ನಡೆಸುವಂತೆ ಬಿಸಿಸಿಐಗೆ ಆಡಳಿತ ಸಮಿತಿ ಪತ್ರದಲ್ಲಿ ಸೂಚಿಸಲಾಗಿದೆ.

ಐಸಿಸಿಯ ವಾರ್ಷಿಕ ಆದಾಯ ಹಂಚಿಕೆ ಕುರಿತಂತೆ ಹೊಸ ನಿಯಮ ಜಾರಿಗೆ ಆಕ್ಷೇಪ ಎತ್ತಿದ್ದ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಗೂ ತಂಡ ಘೋಷಿಸದೇ ಐಸಿಸಿ ವಿರುದ್ಧ ಸೆಟೆದು ನಿಂತಿತ್ತು. ಬಳಿಕ ನಡೆದ ಐಸಿಸಿ ಆಂತರಿಕ ಮತದಾನದಲ್ಲೂ ಬಿಸಿಸಿಐಗೆ ಸೋಲಾಗಿತ್ತು.

ವೆಬ್ದುನಿಯಾವನ್ನು ಓದಿ