ಅಂತಿಮ ಐಪಿಎಲ್ ಪಂದ್ಯದಲ್ಲಿ ಕೊಹ್ಲಿಗೆ ಬೆಲೆ ಕೊಡದ ಯುವ ಆಟಗಾರ! ಏನಿದು ವಿವಾದ?

ಬುಧವಾರ, 3 ಮೇ 2017 (09:11 IST)
ಬೆಂಗಳೂರು: ಮುಂಬೈ ವಿರುದ್ಧ ಈ ಆವೃತ್ತಿಯ ಕೊನೆಯ ಐಪಿಎಲ್ ಪಂದ್ಯವಾಡಿದ್ದ ಬೆಂಗಳೂರು ಮತ್ತೊಂದು ಸೋಲು ಕಂಡಿತ್ತು. ಆ ಸೋಲಿಗೆ ಇನ್ನೊಂದು ಅಂಶ ಕಾರಣವಾಗಿತ್ತು ಎನ್ನುವುದೀಗ ಬೆಳಕಿಗೆ ಬಂದಿದೆ.

 
18 ನೇ ಓವರ್ ನವರೆಗೆ ಪಂದ್ಯ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿತ್ತು. ಆದರೆ ಆ ಓವರ್ ನನ್ನು ಯುವ ಬೌಲರ್ ಅಂಕಿತ್ ಚೌದರಿ ಮಾಡಿದ್ದರು. ಆಗ ಪಂದ್ಯ ರೋಚಕ ಘಟ್ಟದಲ್ಲಿತ್ತು.

ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಬೌಲರ್ ಗಳು ನಾಯಕನ ಸಲಹೆಗೆ ಕಿವಿಗೊಡುತ್ತಾರೆ. ಆದರೆ ಅನಿಕೇತ್ ವಿರಾಟ್ ಕೊಹ್ಲಿ ಸಲಹೆ ಪಾಲಿಸುವ ಬದಲು ಎಬಿಡಿ ವಿಲಿಯರ್ಸ್ ಸಲಹೆ ಪಾಲಿಸಿದರು. ಇದು ಕೊಹ್ಲಿ ಸಿಟ್ಟಿಗೆ ಕಾರಣವಾಯ್ತು.

ಆ ಓವರ್ ನಲ್ಲಿ ಸ್ಲೋ ಬಾಲ್ ಹಾಕು ಎಂದು ಕೊಹ್ಲಿ ಸಲಹೆ ನೀಡಿದ್ದರು. ಆದರೆ ಅನಿಕೇತ್ ಎಬಿಡಿಯಂತೆ ಫಾಸ್ಟ್ ಬಾಲ್ ಹಾಕಿದರು. ಇದರಿಂದ ಪಂದ್ಯವೂ ಕೈ ತಪ್ಪಿ ಹೋಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ