ಬಳಿಕ ಬ್ಯಾಟ್ಸ್ಮನ್ ತುದಿಗೆ ಚೆಂಡನ್ನು ಎಸೆಯುವಂತೆ ನಟಿಸಿದರು. ಆ ಸಂದರ್ಭದಲ್ಲಿ ವಾರ್ನರ್ ಏನಾದರೂ ಹೇಳಿದ್ದಾರೆಂಬುದು ಸ್ಪಷ್ಟವಾಗಿಲ್ಲ. ಅಥವಾ ವಾರ್ನರ್ ಮುಖಭಾವ ಕಂಡು ಪ್ರವೀಣ್ಗೆ ಕೋಪ ಬಂದಿರಬಹುದು. ಪ್ರವೀಣ್ ವಾರ್ನರ್ ಅವರತ್ತ ಏನು, ಏನು ಎಂದು ಕೇಳುತ್ತಾ ಧಾವಿಸಿದರು. ಬೌಲರು ಮತ್ತು ಬ್ಯಾಟ್ಸ್ಮನ್ ನಡುವೆ ಅಂತರ ಕಡಿಮೆಯಾಗುತ್ತಿದ್ದಂತೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅಡ್ಡ ಬಂದು ಪ್ರವೀಣ್ ಅವರ ಭುಜದ ಮೇಲೆ ಕೈಹಾಕಿ ಸಮಾಧಾನಪಡಿಸಿ ದೂರ ಕರೆದುಕೊಂಡು ಹೋದರು.