ರಾಮನವಮಿಗೆ ವಿಶ್ ಮಾಡಿದ್ದೇ ತಪ್ಪಾಯ್ತಾ?! ರಿಷಬ್ ಪಂತ್, ಅನೂಜ್ ರಾವತ್ ಟ್ರೋಲ್

ಮಂಗಳವಾರ, 12 ಏಪ್ರಿಲ್ 2022 (10:00 IST)
ನವದೆಹಲಿ: ಕ್ರಿಕೆಟಿಗರಾದ ರಿಷಬ್ ಪಂತ್ ಮತ್ತು ಅನೂಜ್ ರಾವತ್ ರಾಮನವಮಿ ದಿನ ಶುಭಾಶಯ ಕೋರಿದ್ದರು. ಆದರೆ ಇದೇ ಕಾರಣಕ್ಕೆ ಅವರೀಗ ಟ್ರೋಲ್ ಆಗುತ್ತಿದ್ದಾರೆ.

ಅನ್ಯ ಕೋಮಿನ ಕೆಲವರು ರಿಷಬ್ ಪಂತ್ ಮತ್ತು ಅನೂಜ್ ರಾವತ್ ಗೆ ಧರ್ಮಗಳ ನಡುವೆ ವೈಷಮ್ಯ ಹರಡುವಂತಹ ಟ್ವೀಟ್ ಮಾಡಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.

ಇನ್ನು, ಕೆಲವರು ಈ ರೀತಿ ಕ್ರಿಕೆಟಿಗರಿಗೆ ಟಾಂಗ್ ಕೊಟ್ಟವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಟಾಂಗ್ ಕೊಟ್ಟವರೇ ಮೆಸೇಜ್ ಡಿಲೀಟ್ ಮಾಡುವ ಸ್ಥಿತಿ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ