ಅದರಂತೆ ಇಂದು ದೇಶದ ತೆರಿಗೆ ವ್ಯವಸ್ಥೆಗೆ ಅತೀ ದೊಡ್ಡ ಬದಲಾವಣೆ ತರಲು ಇಂದು ಜಿಎಸ್ ಟಿ ಮಂಡಳಿ ಸಭೆ ನಡೆಸಲಿದೆ. ಇಂದಿನಿಂದ ಎರಡು ದಿನಗಳ ಕಾಲ ಸಭೆ ನಡೆಯಲಿದ್ದು ಈ ಸಭೆಯಲ್ಲಿ ತೆರಿಗೆ ಕಡಿತ, ಜಿಎಸ್ ಟಿ ಕಡಿತದ ಬಗ್ಗೆ ಪ್ರಮುಖವಾಗಿ ತೀರ್ಮಾನವಾಗಲಿದೆ.
ಆದರೆ ಇದಕ್ಕೆ ಇಂಡಿಯಾ ಒಕ್ಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇದರಿಂದ ರಾಜ್ಯಕ್ಕೆ ಬರುವ ಜಿಎಸ್ ಟಿ ಆದಾಯದಲ್ಲಿ ಕಡಿತವಾಗಲಿದೆ ಎನ್ನುವುದು ಆ ರಾಜ್ಯಗಳ ಆರೋಪವಾಗಿದೆ. ಹೀಗಾಗಿ ಆ ನಷ್ಟವನ್ನು ಕೇಂದ್ರ ಭರಿಸಿಕೊಡಬೇಕು ಎಂಬುದು ಅವರ ಒತ್ತಾಯ. ಆದರೆ ಉಳಿದಂತೆ ಬಹುತೇಕ ರಾಜ್ಯಗಳು ಇದಕ್ಕೆ ಒಪ್ಪಿದ್ದು, ಸೆಪ್ಟೆಂಬರ್ 22 ರಿಂದಲೇ ಹೊಸ ಜಿಎಸ್ ಟಿ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.