ನಮ್ಮ ಕುಟುಂಬಕ್ಕೆ ಹೆಮ್ಮೆಯ ದಿನ: ಚಿಕ್ಕಪ್ಪನ ಗೆಲುವು ಸಂಭ್ರಮಿಸಿದ ರಾಮ್‌ಚರಣ್

sampriya

ಬುಧವಾರ, 5 ಜೂನ್ 2024 (18:29 IST)
Photo By X
ಹೈದರಾಬಾದ್:  ಕಳೆದ 10 ವರ್ಷಗಳಿಂದ ರಾಜಕೀಯ ರಂಗದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡು, ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಕಹಿ ಉಂಡ ನಟ ಪವನ್‌ ಕಲ್ಯಾಣ್‌ ಅವರ ಶ್ರಮ ಕೊನೆಗೂ ಫಲಿಸಿದೆ. 

ಕಾಕಿನಾಡ ಜಿಲ್ಲೆಯ ಪಿಠಾಪುರಂ ಕ್ಷೇತ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅನುಭವಿ ರಾಜಕಾರಣಿ ವಂಗ ಗೀತಾ ಅವರನ್ನು ಪವನ್ ಕಲ್ಯಾಣ್ 70,279 ಮತಗಳ ಅಂತರದಿಂದ ಸೋಲಿಸಿ ಅಸೆಂಬ್ಲಿ ಪ್ರವೇಶಿಸಿದರು.  ಇನ್ನೂ ಪವನ್‌ ಕಲ್ಯಾಣ್‌ ಅವರ ಗೆಲುವನ್ನು ಅವರ ಕುಟುಂಬ ಸದಸ್ಯರು, ಅಭಿಮಾನಿಗಳು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಇನ್ನೂ ಫಲಿತಾಂಶ ಪ್ರಕಟವಾಗಿ ಗೆಲುವಿನ ದಡ ಸೇರುತ್ತಿದ್ದ ಹಾಗೇ ಪವನ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಅವರ ಸಂಬಂಧಿಕರು ಮತ್ತು ಜನಪ್ರಿಯ ನಟರಾದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಕೂಡ ಪವನ್ ಕಲ್ಯಾಣ್ ಅವರಿಗೆ ಶುಭ ಹಾರೈಸಿದ್ದಾರೆ.
"ನಮ್ಮ ಕುಟುಂಬಕ್ಕೆ ಹೆಮ್ಮೆಯ ದಿನ! ನನ್ನ ಪವನ್‌ ಕಲ್ಯಾಣ್‌ ಅವರಿಗೆ ಅದ್ಭುತ ಗೆಲುವಿಗೆ ಅಭಿನಂದನೆಗಳು" ಎಂದು ರಾಮ್ ಚರಣ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

"ಈ ಪ್ರಚಂಡ ಗೆಲುವಿಗಾಗಿ ಪವನ್‌ ಕಲ್ಯಾಣ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ವರ್ಷಗಳ ಕಾಲ ಜನರ ಸೇವೆ ಮಾಡುವ ಬದ್ಧತೆ ಯಾವಾಗಲೂ ಹೃದಯ ಸ್ಪರ್ಶಿಯಾಗಿದೆ. ಜನರ ಸೇವೆಗಾಗಿ ನಿಮ್ಮ ಹೊಸ ಪ್ರಯಾಣಕ್ಕೆ ಶುಭಾಶಯಗಳು" ಎಂದು ಅಲ್ಲು ಅರ್ಜುನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲಂಗಾಣದಲ್ಲಿ ನಡೆದ ಚುನಾವಣೆಯಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಅವರ ಚಿಕ್ಕಪ್ಪ ಕೊಂಡ ವಿಶ್ವೇಶ್ವರ್ ರೆಡ್ಡಿ ಕೂಡ ಗೆದ್ದಿದ್ದಾರೆ. ಹೇಳಿಕೆಯಲ್ಲಿ, ರಾಮ್ ಮತ್ತು ಉಪಾಸನಾ ಇಬ್ಬರೂ ಚುನಾವಣೆಯಲ್ಲಿ ತಮ್ಮ ಕುಟುಂಬ ಸದಸ್ಯರ ವಿಜಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

"ಇದೊಂದು ದೊಡ್ಡ ಸುದ್ದಿ. ನಮ್ಮ ಚಿಕ್ಕಪ್ಪಂದಿರು ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ ಎಂದು ನಮಗೆ ತುಂಬಾ ಸಂತೋಷವಾಗಿದೆ, ಅವರಿಗೆ ಸಂತೋಷ ಮತ್ತು ಪ್ರಗತಿಯ ಅಧಿಕಾರಾವಧಿಯನ್ನು ನಾವು ಬಯಸುತ್ತೇವೆ" ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಕೊಡುಗೆಗಾಗಿ ದಂಪತಿಗಳು ಶ್ಲಾಘಿಸಿದರು. ಅವರು ಹೇಳಿದರು, "ಮೋದಿಜಿ ಅವರು ಭಾರತವನ್ನು ಅತ್ಯುತ್ತಮವಾಗಿ ಬದಲಾಯಿಸಿದ್ದಾರೆ, ಅವರು ಅನೇಕ ಸಕಾರಾತ್ಮಕ ನವೀಕರಣಗಳನ್ನು ತಂದಿದ್ದಾರೆ ಎಂದು ಬರೆದುಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ