ಕೊರೊನಾ ತಡೆಯಲು ಬಹಳ ಉತ್ತಮ ಕೆಲಸ ಮಾಡಿದ ನಟ ವಿಜಯ್ ಅಭಿಮಾನಿಗಳು

ಶುಕ್ರವಾರ, 30 ಏಪ್ರಿಲ್ 2021 (08:50 IST)
ಚೆನ್ನೈ : ಕೊರೊನಾ 2ನೇ ಅಲೆಯು ಬಹಳ ಅಪಾಯಕಾರಿಯಾಗಿ ಹರಡುತ್ತಿದೆ. ದೇಶದಾದ್ಯಂತ ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿ ಆಮ್ಲಜನಕದ ಕೊರತೆ ಕಾಡುತ್ತಿದೆ. ಈ ನಡುವೆ ನಟ ವಿಜಯ್ ಅಭಿಮಾನಿಗಳು ಕೊರೊನಾ ತಡೆಯಲು ಬಹಳ ಉತ್ತಮ ಕೆಲಸ ಮಾಡುತ್ತಿದ್ದಾರೆ.

ವಿಜಯ್ ಮಕ್ಕಲ್ ಅಯ್ಯಕಂ ಸದಸ್ಯರು ವಿರೂಡಾಚಲಂ ಸರ್ಕಾರಿ ಆಸ್ಪತ್ರೆಗೆ ತೆರಳಿ ಆಮ್ಲಜನಕದ ಸಿಲಿಂಡರ್ , ಮಾಸ್ಕ್  ಮತ್ತು ಇನ್ನಿತರ ವಸ್ತುಗಳನ್ನು ಒದಗಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದ ಬಳಕೆದಾರರು ತಲಪತಿ ವಿಜಯ್ ಅಭಿಮಾನಿಗಳ ಸಮಯೋಚಿತ ಸಾಮಾಜಿಕ ಸೇವೆಯನ್ನು ಶ್ಲಾಘಿಸುತ್ತಿದ್ದಾರೆ.  ಎಲ್ಲಾ ವೇದಿಕೆಗಳಲ್ಲಿ ಒಳ್ಳೆಯ ಕಾರ್ಯದ ಬಗ್ಗೆ ಹಂಚಿಕೊಳ‍್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ