ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಸಿನಿಮಾ ಇದುವೇ

ಭಾನುವಾರ, 16 ಜನವರಿ 2022 (09:00 IST)
ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚ ಸುದೀಪ್ ಅಭಿನಯಿಸಲಿರುವ ಮುಂದಿನ ಸಿನಿಮಾ ಯಾವುದು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸುದೀಪ್ ಈಗ ಅನೂಪ್ ಭಂಡಾರಿ ಜೊತೆಗೆ ವಿಕ್ರಾಂತ್ ರೋಣ ಮುಗಿಸಿದ್ದಾರೆ. ಇದಾದ ಬಳಿಕ ಇದೇ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರಲಿದೆ. ಆ ಸಿನಿಮಾಗೆ ‘ಅಶ್ವತ್ಥಾಮ’ ಎಂದು ಹೆಸರಿಡಲಾಗಿದೆ.

ಇದೀಗ ವಿಕ್ರಾಂತ್ ರೋಣ ಬಳಿಕ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಇದಕ್ಕಾಗಿ ಅನೂಪ್ ಭಂಡಾರಿ ಈಗಾಗಲೇ ತಯಾರಿ ಆರಂಭಿಸಿದ್ದಾರಂತೆ. ಇದು ಮತ್ತೊಂದು ಮಹತ್ವಾಂಕಾಂಕ್ಷಿ ಸಿನಿಮಾವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ