ವಿಕ್ರಾಂತ್ ರೋಣ ಬಗ್ಗೆ ಟ್ವೀಟ್ ಮಾಡಿದ ಅಮಿತಾಭ್ ಬಚ್ಚನ್: ಆದ್ರೆ ನೆಟ್ಟಿಗರಿಂದ ಟ್ರೋಲ್!

ಸೋಮವಾರ, 27 ಜೂನ್ 2022 (16:32 IST)
ಮುಂಬೈ: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆಯಾಗಿ ಎಲ್ಲೆಡೆ ಸುದ್ದಿಯಾಗಿದೆ. ಇದೀಗ ವಿಕ್ರಾಂತ್ ರೋಣ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಈ ಮೊದಲು ಅಮಿತಾಭ್ ಜೊತೆಗೆ ರಣ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಅದೇ ಸ್ನೇಹದಿಂದ ವಿಕ್ರಾಂತ್ ರೋಣ ಬಗ್ಗೆ ಅಮಿತಾಭ್ ಮೆಚ್ಚುಗೆಯ ಮಾತನಾಡಿದ್ದಾರೆ. ಸುದೀಪ್ ಕನ್ನಡ ಸ್ಟಾರ್ ನಟನ ವಿಕ್ರಾಂತ್ ರೋಣ ಎಂಬ 3  ಡಿ ಸಿನಿಮಾ ಜುಲೈ28 ರಿಂದ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಅಮಿತಾಭ್ ಟ್ವೀಟ್ ಮಾಡಿದ್ದರು.

ಆದರೆ ಈ ಟ್ವೀಟ್ ನೋಡಿ ನೆಟ್ಟಿಗರು ಇದು ಪೇಯ್ಡ್ ಟ್ವೀಟ್ ಥರಾ ಇದೆ. ಯಾರದ್ದೋ ಬಲವಂತದಿಂದ ಅಮಿತಾಭ್ ಟ್ವೀಟ್ ಮಾಡಿರಬೇಕು. ಇದರಲ್ಲಿ ಸಿನಿಮಾ ಬಗ್ಗೆ ಒಂದೊಳ್ಳೆ ಮಾತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ