ಬಿಗ್ ಬಾಸ್ ಗಾಗಿ ಜೊತೆ ಜೊತೆಯಲಿ ಧಾರವಾಹಿ ತೊರೆಯುತ್ತಿರುವ ಬಗ್ಗೆ ಆರ್ಯವರ್ಧನ್ ಹೇಳಿಕೆ

ಶನಿವಾರ, 12 ಡಿಸೆಂಬರ್ 2020 (09:47 IST)
ಬೆಂಗಳೂರು: ಬಿಗ್ ಬಾಸ್ ಶೋಗಾಗಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಜೊತೆ ಜೊತೆಯಲಿ ತೊರೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ್ ಸ್ಪಷ್ಟನೆ ನೀಡಿದ್ದಾರೆ.


ಕಿರುತೆರೆಯಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ ಈ ಧಾರವಾಹಿ ಅನಿರುದ್ಧ್ ಗೆ ಬ್ರೇಕ್ ಕೊಟ್ಟಿತ್ತು. ಈ ಧಾರವಾಹಿಗೆ ಅನಿರುದ್ಧ್ ಅವರೇ ಜೀವಾಳ. ಹೀಗಿರುವಾಗ ಅವರು ಧಾರವಾಹಿ ಬಿಟ್ಟು ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಧಾರವಾಹಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು. ಈ ಹಿನ್ನಲೆಯಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅನಿರುದ್ಧ್ ‘ನಾನು ಜೊತೆ ಜೊತೆಯಲಿ ಧಾರವಾಹಿ ಬಿಟ್ಟು ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂಬ ಸುದ್ದಿಗಳೆಲ್ಲಾ ಸುಳ್ಳು. ಇಂತಹ ವದಂತಿಗಳನ್ನು ನಂಬಬೇಡಿ. ನಾನು ಜೊತೆ ಜೊತೆಯಲಿ ಧಾರವಾಹಿಯನ್ನು ಯಾವುದೇ ಕಾರಣಕ್ಕೂ ತೊರೆಯುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ