ಮೀನಾ ತೂಗುದೀಪ ಫೋಟೋ ವಿರೂಪ ಮಾಡಿ ಪೋಸ್ಟ್, ಆರೋಪಿಗೆ ಶಿಕ್ಷೆಯಾಗಲಿ ಎಂದ ಬಿಗ್‌ಬಾಸ್‌ ಪ್ರಥಮ್

Sampriya

ಸೋಮವಾರ, 8 ಏಪ್ರಿಲ್ 2024 (17:43 IST)
Photo Courtesy X
ಬೆಂಗಳೂರು: ಅಶ್ವಿನಿ ಪುನೀತ್ ರಾಜಕುಮಾರ್ ಬಗ್ಗೆ ಗಜಪಡೆ ಟ್ವೀಟ್ ವಿವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ಮಧ್ಯೆ ತಿಕ್ಕಾಟ ಜೋರಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಕುರಿತಾಗಿ ಹಾಕಿದ್ದ ಅವಹೇಳನಕಾರಿ ಪೋಸ್ಟ್‌ಗೆ ಪ್ರತಿಯಾಗಿ ಕೆಲ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ತಾಯಿ ತೂಗುದೀಪ ಬಗ್ಗೆಯೇ ಕೆಟ್ಟದಾಗಿ ಬರೆದು ಪೋಸ್ಟ್‌ ಮಾಡುತ್ತಿದ್ದಾರೆ.

ಇದನ್ನು ನೋಡಿದವರು ಈ ಬೆಳವಣಿಗೆ ಸರಿಯಲ್ಲ ಎನ್ನುತ್ತಿದ್ದಾರೆ. ಇನ್ನೂ ದರ್ಶನ್ ಅಭಿಮಾನಿಗಳು ಮಾತ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಅಶ್ವಿನಿ ಅವರಿಗೆ ನಟ  ಬಿಗ್‌ಬಾಸ್ ಸ್ಪರ್ಧಿ ಪ್ರಥಮ್ ಅವರು ಬೆಂಬಲ ಸೂಚಿಸಿದ್ದರು.  ಇದೀಗ ಮೀನಾ ತೂಗುದೀಪ ಅವರ ಬಗ್ಗೆ ಹಾಕುತ್ತಿರುವ ಅವಹೇಳನಕಾರಿ ಪೋಸ್ಟ್ ಬಗ್ಗೆಯೂ ಪ್ರಥಮ್ ಪ್ರತಿಕ್ರಿಯಿಸಿದ್ದಾರೆ.

ಈಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಬೆಂಬಲ ಸೂಚಿಸಿದ್ದರು. "ಅದ್ಭುತ ವ್ಯಕ್ತಿತ್ವದ ಅಶ್ವಿನಿ ಅವರಿಗೆ ನಮ್ಮ ಬೆಂಬಲ, ನೀವೇ ನಿಮ್ಮ ಶಕ್ತಿ, ಐಡೆಂಟಿಟಿ ಇಲ್ಲದೋರು ನಿಮ್ಮ ವ್ಯಕ್ತಿತ್ವವನ್ನ ಅವಮಾನಿಸಿದರೆ ಯಾರನ್ನ ಕೇಳೋದು? ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮಾತಾಡಿದ್ರೂ ಏನೂ ಮಾಡದ ಕಾನೂನು ವ್ಯವಸ್ಥೆಯ ವಿರುದ್ಧ ಮೌನ ಪ್ರತಿಭಟನೆ. ಎಲ್ಲರೂ ಅಶ್ವಿನಿ ಮೇಡಂ ಫೋಟೋ ಹಾಕಿ ಬೆಂಬಲಿಸೋಣ"

"ನಾನು ತುಂಬಾ ಗೌರವಿಸೋ, ಪ್ರೀತಿಸೋ ಮೀನಾ ತೂಗದೀಪ ಶ್ರೀನೀವಾಸ್‌ರವರ ಫೋಟೋ ವಿರೂಪ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿರೋದು ನೋಡಿ ತೀವ್ರ ಬೇಸರವಾಯ್ತು. ಯಾರೇ ಆಗ್ಲಿ ಮೊದಲು ಮಹಿಳೆಯರನ್ನ ಗೌರವಿಸಿ. ಮೀನಾ ತೂಗದೀಪ ಶ್ರೀನೀವಾಸ್ ಅಮ್ಮನವರು ಮತ್ತು ಅಶ್ವಿನಿ ಮೇಡಂರವರ ಬಗ್ಗೆ ಅವಹೇಳನ ಮಾಡಿರೋ ಎಲ್ಲರಿಗೂ ಶೀಘ್ರದಲ್ಲೇ ಕಾನೂನಿನ ಕ್ರಮವಾಗಲಿ" ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ