ಸಾವಿನಲ್ಲೂ ಆದರ್ಶ ಮೆರೆದ ನಟಿ ಬಿವಿ ರಾಧಾ

ಭಾನುವಾರ, 10 ಸೆಪ್ಟಂಬರ್ 2017 (10:48 IST)
ಬೆಂಗಳೂರು: ಇಂದು ಬೆಳಿಗ್ಗೆ ನಿಧನರಾದ ಹಿರಿಯ ನಟಿ ಬಿವಿ ರಾಧಾ ಸಾವಿನಲ್ಲೂ ಆದರ್ಶ ಮೆರೆದಿದ್ದಾರೆ. ತಮ್ಮ ದೇಹವನ್ನು ದಾನ ಮಾಡುವ ಮೂಲಕ ಪತಿಯ ಹಾದಿಯಲ್ಲಿ ನಡೆದಿದ್ದಾರೆ.

 
ರಾಧಾ ಪತಿ ನಿರ್ದೇಶಕ ಕೆಎಸ್ ಎಲ್ ಸ್ವಾಮಿ ಕೂಡಾ ತಮ್ಮ ದೇಹದಾನ ಮಾಡಲು ತಿಳಿಸಿದ್ದರು. ಅದರಂತೆ ಎರಡು ವರ್ಷಗಳ ಹಿಂದೆ ಅವರು ನಿಧನರಾದಾಗ ಮೃತದೇಹವನ್ನು ಮಣ್ಣುಮಾಡದೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿತ್ತು.

ಇದೀಗ ರಾಧಾ ಅವರೂ ಕೂಡಾ ಪತಿಯಂತೆ ನಡೆಯಲು ಇಚ್ಛಿಸಿದ್ದರಂತೆ. ಹಾಗಾಗಿ ಅವರ ಕುಟುಂಬದವರು ಹಿರಿಯ ನಟಿಯ ಮೃತದೇಹವನ್ನೂ ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಂಶೋಧನೆಗಾಗಿ ದಾನ ಮಾಡಿದ್ದಾರೆ. ಈ ಮೂಲಕ ದಂಪತಿ ಆದರ್ಶ ಮೆರೆದಿದ್ದಾರೆ.

ಇದನ್ನೂ ಓದಿ.. ದನ ಕಾಯೋನ್ ಚಿತ್ರ ನಿರ್ಮಾಪಕರ ವಿರುದ್ಧ ಯೋಗರಾಜ್ ಭಟ್ ದೂರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ