ನಟ ಸುಶಾಂತ್ ಸಿಂಗ್ ಗೆಳೆಯನಿಂದ 200 ಕೋಟಿ ಪರಿಹಾರ ಕೋರಿ ಕೇಸ್

ಶುಕ್ರವಾರ, 16 ಅಕ್ಟೋಬರ್ 2020 (20:12 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಗೆಳೆಯರೊಬ್ಬರು ಬರೋಬ್ಬರಿ 200 ಕೋಟಿ ರೂ. ಮಾನನಷ್ಟ ಪರಿಹಾರ ಕೋರಿ ಕೇಸ್ ದಾಖಲು ಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಸಂದೀಪ್ ಸಿಂಗ್ ಅವರು ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಮಾನನಷ್ಟ ಆರೋಪದ ಮೇಲೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಸಂದೀಪ್ ಸಿಂಗ್ ಪ್ರಕಟಿಸಿದ್ದು,  ಸುದ್ದಿ ಚಾನೆಲ್ "ಕ್ರಿಮಿನಲ್ ಉದ್ದೇಶ" ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಹಲವಾರು ಸಂದೇಶಗಳನ್ನು ತಮ್ಮ ವಿರುದ್ಧ ಪ್ರಸಾರ ಮಾಡಿದೆ ಎಂದು ಹೇಳಿದ್ದಾರೆ.

ರಿಪಬ್ಲಿಕ್ #ArrestSandeepSsingh ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಅಭಿಯಾನವನ್ನು ನಡೆಸಿತ್ತು ಎಂದು ಸಿಂಗ್ ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ