ಸಂಚಾರಿ ವಿಜಯ್ ಹೆಸರಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಮಾಡಿದ ಒಳ್ಳೆ ಕೆಲಸ

ಶುಕ್ರವಾರ, 18 ಜೂನ್ 2021 (09:46 IST)
ಬೆಂಗಳೂರು: ಇತ್ತೀಚೆಗೆ ನಿಧನರಾದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹೆಸರಿನಲ್ಲಿ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಒಳ್ಳೆಯ ಕೆಲಸವೊಂದನ್ನು ಮಾಡಿದ್ದಾರೆ.


ಬಿಗ್ ಬಾಸ್ ಗೆ ತೆರಳುವ ಮುನ್ನ ಚಂದ್ರಚೂಡ್ ತಮ್ಮ ಸಹೋದರ ಸಮಾನ ವಿಜಯ್ ಹೆಸರಿನಲ್ಲಿ ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿಸಂಗ್ರಹಾಲಯದ ಗಿಣಿಯೊಂದನ್ನು ದತ್ತು ಪಡೆದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಂದ್ರಚೂಡ್ ‘ಸಂಚಾರಿ ವಿಜಯ್ ನಿನಗೆ ಗಿಣಿ ಅದಕ್ಕೇ ನಿನ್ ಹೆಸರಿನಲ್ಲೊಂದು ತಗೊಂಡಿದ್ದೀನಿ ನೋಡಿ ಸ್ವಾಮಿ’ ಎಂದು ಬರೆದುಕೊಂಡಿದ್ದಾರೆ. ಸಂಚಾರಿ ವಿಜಯ್ ನಿಧನರಾದಾಗ ಚಂದ್ರಚೂಡ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ