ದರ್ಶನ್ ಗಾಗಿ ಪರೋಕ್ಷವಾಗಿ ರೇಣುಕಾಸ್ವಾಮಿ ಕುಟುಂಬದವರ ಮನವೊಲಿಸಲು ಶ್ರಮಿಸುತ್ತಿದ್ದಾರಾ ಚಿತ್ರರಂಗದ ಆಪ್ತರು

Krishnaveni K

ಸೋಮವಾರ, 29 ಜುಲೈ 2024 (14:26 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ಬಚಾವ್ ಮಾಡಲು ಈಗ ಕನ್ನಡ ಚಿತ್ರರಂಗವೇ ಪರೋಕ್ಷವಾಗಿ ರೇಣುಕಾ ಕುಟುಂಬದವರ ಮನವೊಲಿಸಲು ಪ್ರಯತ್ನಿಸುತ್ತಿದೆಯಾ ಎಂಬ ಅನುಮಾನ ಮೂಡಿದೆ.

ದರ್ಶನ್ ರನ್ನು ಜೈಲಿನಲ್ಲಿ ಭೇಟಿಯಾಗಿ ಬರುವ ಚಿತ್ರನಟ ವಿನೋದ್ ರಾಜ್ ಮರುದಿನವೇ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿ ಧನಸಹಾಯ ಮಾಡಿದ ನೆಟ್ಟಿಗರು ಈ ಅನುಮಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮತ್ತೊಬ್ಬ ನಟ, ನಿರ್ಮಾಪಕ ಗಣೇಶ್ ರಾವ್ ರೇಣುಕಾಸ್ವಾಮಿ ಕುಟುಂಬದವರನ್ನು ಸಾಂತ್ವನಿಸುವ ನೆಪದಲ್ಲಿ ಭೇಟಿಯಾಗಿದ್ದಾರೆ.

ಅವರೂ ಕೂಡಾ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಬಂದು ತಮ್ಮ ಕೈಲಾದ ಸಹಾಯ ಮಾಡಿದ ಬಳಿಕ ದರ್ಶನ್ ನನಗೆ ತಿಳಿದ ಮಟ್ಟಿಗೆ ಅಷ್ಟೊಂದು ಕ್ರೂರ ವ್ಯಕ್ತಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ನೋಡಿ ಜನರ ಅನುಮಾನ ಇನ್ನಷ್ಟು ಹೆಚ್ಚಾಗಿದೆ.

ದರ್ಶನ್ ಪರವಾಗಿ ಅವರ ಆಪ್ತರು ರೇಣುಕಾ ಕುಟುಂಬದವರ ಮನವೊಲಿಸಲು ಪರೋಕ್ಷವಾಗಿ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಆಗಸ್ಟ್ 1 ರವರೆಗೆ ದರ್ಶನ್ ನ್ಯಾಯಾಂಗ ಬಂಧನ ಅವಧಿಯಿದೆ. ಅದಾದ ಬಳಿಕ ಅವರು ಜಾಮೀನಿಗೆ ಪ್ರಯತ್ನಿಸಬಹುದು. ಇದರ ನಡುವೆ ರೇಣುಕಾ ಕುಟುಂಬದ ಕ್ಷಮೆ ಸಿಕ್ಕರೆ ಅವರ ಹಾದಿ ಸುಗಮವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ