ರೇಣುಕಾಸ್ವಾಮಿ ಕುಟುಂಬದ ಜತೆಗಿನ ರಾಜಿ ಸಂಧಾನ ನನಗೆ ಬೇಕಾಗಿಲ್ಲ ಎಂದಾ ವಿನೋದ್ ರಾಜ್

Sampriya

ಸೋಮವಾರ, 29 ಜುಲೈ 2024 (11:35 IST)
ಬೆಂಗಳೂರು: ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿ ಧನ ಸಹಾಯ ಮಾಡಿ ನಟ ವಿನೋದ್ ರಾಜ್ ಅವರು ದರ್ಶನ್ ಪರ ರಾಜಿ ಸಂಧಾನಕ್ಕೆ ಹೋಗಿದ್ದರು ಎಂಬ ಸುದ್ದಿ ಚರ್ಚೆಗೆ ಕಾರಣವಾಗಿತ್ತು.

ಇದೀಗ ಈ ಸಂಬಂಧ ವಿನೋದ್ ರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.  ದರ್ಶನ್ ಅವರನ್ನು ಭೇಟಿಯಾದ ಬೆನ್ನಲ್ಲೇ ಮೃತ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿದ್ದರಿಂದ ರಾಜಿ ಸಂಧಾನಕ್ಕೆ ಹೋಗಿದ್ದೀನಿ ಅಂತೆಲ್ಲಾ ಸುದ್ದಿಯಾಯಿತು. ಆದರೆ ಅದು ಬರೀ ಸುಳ್ಳು. ಕಲಾವಿದನಾಗಿರುವ ದರ್ಶನ್ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಬಂದಿದ್ದೇನೆ ಅಷ್ಟೇ.

ಇನ್ನೂ ಮೃತ ರೇಣುಕಾಸ್ವಾಮಿಯ ಪತ್ನಿ ಗರ್ಭಿಣಿ ಆಗಿರುವುದರಿಂದ ಹುಟ್ಟುವ ಮಗುವಿಗೆ ಒಳ್ಳೆಯದಾಗಲಿ ಎಂದು ಧನ ಸಹಾಯ ಮಾಡಿದ್ದೇನೆ. ಆದ್ದರಿಂದ ನನ್ನ ಕೈಲಾಗಿರುವ ಮಟ್ಟಿಗೆ ಸಹಾಯ ಮಾಡಿದ್ದೇನೆ. ಆದರೆ ಈ ಪ್ರಕರಣ ಸಂಬಂಧ ನಾನು ರಾಜಿ ಸಂಧಾನ ಮಾಡಲು ಹೋಗಿರಲಿಲ್ಲ. ಅದು ನನಗೆ ಬೇಕಾಗೂ ಇಲ್ಲ ಎಂದು ವಿನೋದ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

ವಿನೋದ್ ರಾಜ್ ಅವರು ಕಳೆದ ವಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಿ ಕೆಲಹೊತ್ತು ಅವರ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ್ ಅವರು ಕೂಡಾ ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ